ರಂಗೇರಿದ ಮಸ್ಕಿ ಚುನಾವಣಾ ಕಣ; ಇಂದಿನಿಂದ ಮಸ್ಕಿಯಲ್ಲಿ ವಿಜಯೇಂದ್ರರಿಂದ ಮತಬೇಟೆ

ಶನಿವಾರ, 20 ಮಾರ್ಚ್ 2021 (12:40 IST)
ಬೆಂಗಳೂರು : ಮಸ್ಕಿ ಉಪ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ  ಮಸ್ಕಿ ಚುನಾವಣಾ ಕಣ ರಂಗೇರಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ  ಬಿಎಸ್ ವಿಜಯೇಂದ್ರ ಮಸ್ಕಿ ರಣಕಣಕ್ಕಿಳಿದಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ಅವರು ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ. ಇಂದಿನಿಂದ ಮಸ್ಕಿಯಲ್ಲಿ ವಿಜಯೇಂದ್ರ ಮತಬೇಟೆ ಶುರು ಮಾಡಲಿದ್ದಾರೆ. ಸಿಎಂ, ವಿಜಯೇಂದ್ರ ನೇತೃತ್ವದಲ್ಲಿ ರ್ಯಾಲಿ ನಡೆಸಲಾಗುವುದು. ರ್ಯಾಲಿ ಬಳಿಕ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಶಿರಾ, ಕೆ.ಆರ್.ಪೇಟೆ ಗೆದ್ದ ವಿಜಯೇಂದ್ರಗೆ ತಾವು ಉಸ್ತುವಾರಿ ಹೊತ್ತಿರೋ ಮಸ್ಕಿ ಕ್ಷೇತ್ರ ಒಂದು ಸವಾಲಾಗಿದೆ. ಪ್ರತಾಪ್ ಗೌಡ ಪರ ವಿಜಯೇಂದ್ರ ಮತಬೇಟೆ ನಡೆಸಲಿದ್ದು, ವಿಜಯೇಂದ್ರ ಉಸ್ತುವಾರಿಯಿಂದ ಉತ್ಸಾಹ ಹೆಚ್ಚಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ