ಮೀಸೆ ಕಟ್ ಆಗಿದ್ದಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು!

ಸೋಮವಾರ, 22 ಜುಲೈ 2019 (15:18 IST)
ಮೀಸೆ ಕಟ್ ಮಾಡಿದ್ದಕ್ಕೆ ಕ್ಷೌರಿಕ ಹಾಗೂ ಗ್ರಾಹಕನ ನಡುವೆ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗ್ರಾಹಕ ಕಿರಣ್ ಎಂಬುವರು ಕೂದಲು ಬದಲಾಗಿ ಮೀಸೆ ಕಟ್ ಮಾಡಿರೋ ಕ್ಷೌರಿಕ ಸುನೀಲ್ ವಿರುದ್ಧ ಕೇಸ್ ಹಾಕಿದ್ದಾರೆ.

ತಲೆ ಕೂದಲು ಬದಲಿಗೆ ಮೀಸೆ ಕಟ್ ಮಾಡಿರೋದು ಮನೆಗೆ ಹೋದ ಬಳಿಕ ತಿಳಿಸಿದೆ. ಈ ಕುರಿತು ಕೇಳಿದ್ರೆ ಕ್ಷೌರಿಕ ಸುನೀಲ್ ಜೀವ ಬೆದರಿಕೆ ಒಡ್ಡಿದ್ದಾರೆ ಅಂತ ಗ್ರಾಹಕ ಕಿರಣ್ ಹೇಳ್ತಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ.

ಇನ್ನು ಕ್ಷೌರಿಕರ ಸಮುದಾಯದವರು ಸಭೆ ಮಾಡಿದ್ದು, ಇನ್ನು ಮುಂದೆ ಕಿರಣ್ ಗೆ ಕ್ಷೌರ ಸೇವೆ ಒದಗಿಸಬಾರದು ಅಂತ ತೀರ್ಮಾನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ