ಕಾಂಗ್ರೆಸ್​ ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತೆ

ಸೋಮವಾರ, 15 ಮೇ 2023 (19:15 IST)
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜಾರಿ ವಿಚಾರಕ್ಕೆ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಚುನಾವಣೆ ಸಂದರ್ಭದಲ್ಲೇ ಹೇಳಿದ್ದೇನೆ. ಗ್ಯಾರಂಟಿ ಕಾರ್ಡ್ ಜಾರಿಯಿಂದಾಗಿ ರಾಜ್ಯ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೆ, ದಿವಾಳಿಯಾಗುತ್ತೆ ಎಂದಿದ್ದಾರೆ. ನೋಡೋಣ ಅವರು ಮೊದಲು ಸರ್ಕಾರ ಮಾಡಲಿ, ನೋಡಿದ ಮೇಲೆ ನಮಗಿಂತ ಜನ ತೀರ್ಮಾನ ಮಾಡ್ತಾರೆ. ಜನ ಆ ಗ್ಯಾರಂಟಿಗಳನ್ನ ನೋಡಿ ಅಧಿಕಾರ ಕೊಟ್ಟಿದ್ದಾರೆ.. ಆ ನಂಬಿಕೆಯನ್ನ ಅವರು ಎಷ್ಟರ ಮಟ್ಟಿಗೆ ಉಳಿಸಿಕೊಳ್ತಾರೆ ಅನ್ನೋದನ್ನ ಜನ ತೀರ್ಮಾನ ಮಾಡ್ತಾರೆ ಎಂದರು.. ಇನ್ನು ಕಾಂಗ್ರೆಸ್ ಸಿಎಂ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ರು, ಸಹಜವಾಗಿ ಸಿಎಂ ಸ್ಥಾನ ಇದ್ದಾಗ ಈ ರೀತಿ ಆಗುತ್ತೆ.. ಅದು ಆ ಪಕ್ಷದ ಆಂತರಿಕ ವಿಚಾರ, ನಾನು ಏನೂ ಹೇಳಲು ಬಯಸುವುದಿಲ್ಲ.. ನಮ್ಮ ಪಕ್ಷದಲ್ಲಿ ಬುದ್ದಿವಂತರು, ಯುವಕರು ಇದ್ದಾರೆ, ಎಲ್ಲರೂ ಸೇರಿ ಪಕ್ಷ ಕಟ್ಟುತ್ತೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ