ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವದ ಕಥೆ ಬಯಲು..!

ಶನಿವಾರ, 8 ಜುಲೈ 2023 (16:47 IST)
ಭಾನುವಾರ ಬೆಳಿಗ್ಗೆ ಚನ್ನನಾಯಕನಪಾಳ್ಯದ ಮೀನಾ ವೈನ್ಸ್ ಎದುರಿನ ಖಾಲಿ ಜಾಗದಲ್ಲಿ ಅಪರಿಚಿತ ಶವವೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಅಪರಿಚಿತ ಶವದ ಜಾಡು ಹಿಡಿದು ಹೊರಟಿದ್ದ ಪೀಣ್ಯಾ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಸತ್ತ ವ್ಯಕ್ತಿ ಹೆಗ್ಗನಹಳ್ಳಿ ನಿವಾಸಿ 38 ವರ್ಷದ ಆನಂದ್ ಎಂದು ಗೊತ್ತಾಗಿದೆ. ಹಾಗೆ ಸತೀಶ್, ಪುಟ್ಟ ಹಾಗೂ ದಯಾನಂದ್ ಎಂಬ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟದ್ದಾರೆ. 

ಪೀಣ್ಯಾ ಪೊಲೀಸರು ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿದ ಮರು ದಿನವೇ ರಾಜಗೋಪಾಲ ನಗರ ಠಾಣೆಯಲ್ಲಿ  ಆನಂದ್ ಪತ್ನಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ರು. ಈ ಮಾಹಿತಿ ಪೀಣ್ಯಾ ಪೊಲೀಸರಿಗೆ ಸಿಕ್ಕ ಮೇಲೆ ಆನಂದ್ ಪತ್ನಿಯನ್ನ ಶವದ ಗುರುತು ಪತ್ತೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅಪರಿಚಿತ ಶವ ಆನಂದ್ ಎಂದು ಗುರುತು ಸಿಕ್ಕಿದೆ. ಬಳಿಕ ಆನಂದ್ ಕಾಲ್ ಹಿಸ್ಟರಿ, ಕೊಲೆಯಾದ ಜಾಗದ ಅಕ್ಕಪಕ್ಕದ ಸಿಸಿಟಿವಿ ಚೆಕ್ ಮಾಡಿದಾಗ ಆರೋಪಿಗಳ ಓಡಾಟ ಕಂಡುಬಂದಿತ್ತು. ಬಳಿಕ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಕೊಲೆ ರಹಸ್ಯ ಬಯಲಾಗಿದೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ