ದೇವೇಗೌಡ್ರ ಕಂಡ್ರೆ ಭಯ ಇಲ್ಲ ಎಂದ ಕೇಂದ್ರ ಸಚಿವ

ಸೋಮವಾರ, 11 ಮಾರ್ಚ್ 2019 (16:06 IST)
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕಂಡರೆ ನನಗೆ ಯಾವ ಭಯ ಇಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪಕ್ಷದಲ್ಲೇ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ನನಗೆ ನಮ್ಮ‌ ಪಕ್ಷದಲ್ಲಿ ಸಮಸ್ಯೆಯಿಲ್ಲ. ನನಗೆ ಜೆಡಿಎಸ್ ಕಾಂಗ್ರೆಸ್ ನವರಿಂದ ವಿರೋಧ ಇದೆ ಎಂದರು. ದೇವೇಗೌಡರು ಅಂದ್ರೆ ಭಯ ಇಲ್ಲ ಎಂದ ಅವರು, ದೇವೇಗೌಡರ ಮೇಲೆ ಗೌರವ ಇದೆ.

ಇಷ್ಟು ದಿನ ಸಣ್ಣವರ ಜೊತೆ ಸೆಣಸಾಡಿದೀನಿ. ಈಗ ದೊಡ್ಡವರು ಸಿಕ್ಕಿದ್ದಾರೆ. ದೊಡ್ಡವರ ಜೊತೆ ಸೆಣಸಾಟ ಖುಷಿ ತಂದಿದೆ. ಇದರಲ್ಲಿ ನಾನು ಯಶಸ್ಸಾಗುವ ವಿಶ್ವಾಸ ಇದೆ ಎಂದು ಸದಾನಂದಗೌಡ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ