ಪ್ರಧಾನಿ ಮೋದಿ ಭಯೋತ್ಪಾದಕರಂತೆ ವರ್ತಿಸತ್ತಿದ್ದಾರೆ- ಕಾಂಗ್ರೆಸ್ ನಾಯಕಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ

ಭಾನುವಾರ, 10 ಮಾರ್ಚ್ 2019 (13:50 IST)
ಶಂಶಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕರಂತೆ ವರ್ತಿಸತ್ತಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ನಾಯಕಿ ಮತ್ತು ಹಿರಿಯ ನಟಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ತೆಲಂಗಾಣದ ಶಂಶಾಬಾದ್ ನಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ವಿಜಯಶಾಂತಿ, ‘ಪ್ರಧಾನಿ ಮೋದಿ ಅವರು ಜನರಲ್ಲಿ ಭೀತಿಯನ್ನು ಬಿತ್ತಲು ಯತ್ನಿಸುತ್ತಿದ್ದಾರೆ. ಅವರ ಈ ಕೃತ್ಯದಿಂದ ತುಂಬಾ ಜನರು ಭಯೋತ್ಪಾದನನ್ನು ನೋಡುವ ರೀತಿಯಲ್ಲಿ ಮೋದಿ ಅವರನ್ನು ನೋಡಲು ಆರಂಭಿಸಿದ್ದಾರೆ’ ಎಂದು ಹೇಳಿದ್ದಾರೆ.


ಮೋದಿ ಅವರ ಗುರಿ ನಿರಂಕುಶಮತಿ ಆಡಳಿತವಾದರೆ, ರಾಹುಲ್ ಗಾಂಧಿ ಪ್ರಜಾಡಳಿತದ ಪ್ರತೀಕವಾಗಿದ್ದಾರೆ. ಮೋದಿ ಅವರು ಸರ್ವಾಧಿಕಾರಿ ಧೋರಣೆಯ ಆಡಳಿತ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡುವುತ್ತಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ