ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ದುಷ್ಕರ್ಮಿಗಳು

ಭಾನುವಾರ, 17 ಡಿಸೆಂಬರ್ 2017 (08:28 IST)
ಬೆಂಗಳೂರು: ಮೊದಲು ಯಾವುದೇ ಗುಂಪು, ಘರ್ಷಣೆಗಳು ನಡೆಸುತ್ತಿದ್ದರೆ, ಪೊಲೀಸರು ಬಂದ ತಕ್ಷಣ ಹೆದರಿ ಅಲ್ಲಿಂದ ಓಡಿ ಹೋಗುತ್ತಿದ್ದ ಜನರು ಆದರೆ ಈಗ ಪೊಲೀಸರ  ಮೇಲೆಯೇ ಹಲ್ಲೆ ಮಾಡುವ ಹಂತಕ್ಕೆ ಬಂದು ಬಿಟ್ಟಿದ್ದಾರೆ ಎಂಬುದಕ್ಕೆ  ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ನಡೆದ ಘಟನೆಯೇ ಒಂದು  ಸಾಕ್ಷಿ.


ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ತಡರಾತ್ರಿಯಲ್ಲಿ ಮದ್ಯ ಸೇವಿಸಿದ ಗುಂಪೊಂದು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದನ್ನು ಕಂಡು ಪೊಲೀಸರು ಪ್ರಶ್ನಿಸಿದಕ್ಕೆ  ಅವರ  ಮೇಲೆಯೇ ಹಲ್ಲೆ ಮಾಡಿದರು. ಕುಡಿದ ಅಮಲಿನಲ್ಲಿ ದುಷ್ಕರ್ಮಿಗಳ ತಂಡವೊಂದು ಈ ಕೃತ್ಯ ಎಸಗಿದ್ದಾರೆ.


ಈ ಘಟನೆಯಿಂದ ಪೊಲೀಸ್ ಪೇದೆಯೊಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಡಿಗೇ ಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ