ಮುಂದೆ ಬಿಜೆಪಿ ಸರ್ಕಾರ ಇರಲ್ಲ-ಉಮೇಶ್ ಜಾಧವ್ ಎಡವಟ್ಟು ಹೇಳಿಕೆ

ಭಾನುವಾರ, 24 ಮಾರ್ಚ್ 2019 (10:33 IST)
ಯಾದಗಿರಿ : ಸರ್ಕಾರವನ್ನು ಟೀಕಿಸುವ ಭರದಲ್ಲಿ ಶಾಸಕ ಉಮೇಶ್ ಜಾಧವ್ ಎಡವಟ್ಟು ಹೇಳಿಕೆಯೊಂದನ್ನು ನೀಡಿ ಮುಜುಗರಕ್ಕೀಡಾಗಿದ್ದಾರೆ.


ಇತ್ತೀಚೆಗಷ್ಟೆ ಕಾಂಗ್ರೆಸ್ ನಾಯಕರ ವಿರುದ್ಧ ಬೇಸರಗೊಂಡು ಬಿಜೆಪಿಗೆ ಸೇರ್ಪಡೆಯಾದ ಶಾಸಕ ಉಮೇಶ್ ಯಾದಗಿರಿ ಜಿಲ್ಲೆಯ ಗುರುಮೀಠಕಲ್ ಪಟ್ಟಣಕ್ಕೆ ಬಂದಾಗ ಸುದ್ದಿಗಾರರ ಜೊತೆ ಮಾತನಾಡುವ ಭರದಲ್ಲಿ ಮುಂದೆ ಬಿಜೆಪಿ ಸರ್ಕಾರ ಇರಲ್ಲ ಎಂದು ಎಡವಟ್ಟು ಹೇಳಿಕೆ ನೀಡಿದ್ದಾರೆ.


ನಂತರ ಸರಿಪಡಿಸಿಕೊಂಡು ಬಿಜೆಪಿ ಸರ್ಕಾರ ಇರತ್ತೆ, ಕಾಂಗ್ರೆಸ್ ಸರ್ಕಾರ ಇರೋಲ್ಲ ಎಂದಿದ್ದಾರೆ. ಇನ್ನೂ ಜಾಧವ್ ಅವರ ಮಾತಿನಿಂದ ಅಕ್ಕಪಕ್ಕದಲ್ಲಿ ಕುಳಿತಿದ್ದ ಮುಖಂಡರು ನಗುತ್ತಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ