ಅಮವಾಸ್ಯೆ ಬಂದಾಗ ಹೀಗೆಲ್ಲಾ ಆಡ್ತಾರೆ-ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ

ಬುಧವಾರ, 9 ನವೆಂಬರ್ 2022 (20:19 IST)
ಕಾಂಗ್ರೆಸ್ ಅಂದರೆ ಪುಂಡರ ಗುಂಪು. ಅದನ್ನು ಅವರೇ ಬೀದಿಗೆ ಇಟ್ಟು ಪ್ರದರ್ಶಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸತೀಶ್​​ ಜಾರಕಿಹೊಳಿ ಹೇಳಿಕೆಗೆ ತಿರುಗೇಟು​​​ ಕೊಟ್ಟಿದ್ದಾರೆ. ಹುಚ್ಚರಿಗೆ ಅಮವಾಸ್ಯೆ, ಹುಣ್ಣಿಮೆ ಬಂದಾಗ ತಲೆ ಕೆಡುತ್ತದಂತೆ. ಹಾಗೆಯೇ ಕಾಂಗ್ರೆಸ್ಸಿಗರಿಗೂ ಆಗಿದೆ. ಹಿಂದುತ್ವವನ್ನು ಅನುಮಾನ ಪಡುವವರು ಅವರ ತಂದೆ ತಾಯಿಯನ್ನೂ ಅನುಮಾನ ಪಟ್ಟಂತೆಯೇ. ಕಾಂಗ್ರೆಸ್​​ನವರು ಕೇಸರಿ ಬಣ್ಣ ಕಂಡರೆ ಮೂರ್ಛೆ ಹೋಗುತ್ತಾರೆ. ಬಿಳಿ ಟೋಪಿ ಕಂಡರೆ ಟೋಪಿ ಹಾಕಿಸಿಕೊಂಡು ತಲೆ ಬಾಗುತ್ತಾರೆ ಎಂದು ಅಪಹಾಸ್ಯ ಮಾಡಿದ್ರು. ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಉಚ್ಛಾಟನೆ ಮಾಡದೇ ಇದ್ದರೆ ಸತೀಶ್​​​​ ಹೇಳಿಕೆಯನ್ನು ಕಾಂಗ್ರೆಸ್​​​​​ ಒಪ್ಪಿಕೊಂಡು ಅವರು ಹಿಂದೂ ವಿರೋಧಿಯಾದಂತಾಗುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ