ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ-ಡಿಕೆಶಿ

ಭಾನುವಾರ, 8 ಜನವರಿ 2023 (15:00 IST)
ಕರ್ನಾಟಕ ಅಂದ್ರೆ ಭಾರತ ಸರ್ಕಾರಕ್ಕೆ ಮೋದಿ ಸರಕಾರಕ್ಕೆ ಗೌರವ ಇಲ್ಲ.ನಾರಾಯಣಗುರು ಟ್ಯಾಬ್ಲೋ ಕಿತ್ತುಹಾಕಿದ ನೋವನ್ನೇ ಇನ್ನೂ ಕಡಿಮೆ ಮಾಡಿಕೊಳ್ಳಲು ಆಗ್ತಿಲ್ಲ.೨೫-೨೬ ಎಂಪಿಗಳಿದ್ದಾರೆ ಒಂದು ದಿನವೂ ಕರೆದು ಚರ್ಚ ಮಾಡಿಲ್ಲ.ಬಿಜೆಪಿಯವರಿಗೆ ಮಾತನಾಡುವ ಶಕ್ತಿಯೂ ಇಲ್ಲ.ಮಹದಾಯಿ ವಿಚಾರದಲ್ಲಿ, ರಾಜ್ಯದ ಸಮಸ್ಯೆಗಳ ವಿಚಾರದಲ್ಲಿ ಡೆಲಿಗೇಷನ್ ಕರೆದುಕೊಂಡು ಹೋಗಿ ಮಾತನಾಡಬಹುದಲ್ಲ?ಮಹದಾಯಿ ವಿಚಾರಕ್ಕೂ ಕರೆದುಕೊಂಡು ಹೋಗಿ ಮಾತನಾಡಬಹುದಲ್ಲ.ಎಸ್.ಸಿ ರಿಸರ್ವೇಷನ್ ಅನ್ನು ೯ ನೇ ಶೆಡ್ಯುಲ್ ನಲ್ಲಿ ಸೇರಿಸೋದಕ್ಕೆ ಆಗ್ತಿಲ್ಲ.ಯಾವ ರೀತಿ ದಲಿತರಿಗೆ ಮೋಸ ಮಾಡ್ತಿದ್ದಾರೆ ಅರ್ಥ ಆಗ್ತಿದೆ ಈಗ.ರಾಜ್ಯಕ್ಕೆ ದೊಡ್ಡ ಅನ್ಯಾಯ ಆಗ್ತಿದೆ ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ