ಕಟಾರಿಯಾಗೆ ಬೆದರಿಕೆ: ಶಾಸಕ ಶಿವಮೂರ್ತಿ ವಿರುದ್ಧ ಸಿಎಂ ಗರಂ

ಬುಧವಾರ, 11 ಅಕ್ಟೋಬರ್ 2017 (14:09 IST)
ಐಎಎಸ್ ಅಧಿಕಾರಿ ರಾಜೇಂದ್ರ ಕಟಾರಿಯಾಗೆ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ, ಶಾಸಕ ಶಿವಮೂರ್ತಿ ವಿರುದ್ಧ ಗರಂ ಆಗಿದ್ದಾರೆ.
ಶಾಸಕ ಶಿವಮೂರ್ತಿಗೆ ಕ್ಲಾಸ್ ತೆಗೆದುಕೊಂಡ ಸಿಎಂ, ಐಎಎಸ್ ಅಧಿಕಾರಿ ಅಂದ್ರೆ ಏನೆಂದುಕೊಂಡಿದ್ದೀಯಾ? ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದು ಗೊತ್ತಿಲ್ಲವಾ? ಹೆಚ್ಚು ಕಡಿಮೆ ಆದ್ರೆ ನಿನ್ನನ್ನು ಜೈಲಿಗೆ ಕಳುಹಿಸುತ್ತಾರೆ . ಇಂತಹ ನಾನ್‌ಸೆನ್ಸ್ ಕೆಲಸ ಮಾಡಬೇಡ ಎಂದು ಏಕವಚನದಲ್ಲಿಯೇ ತರಾಟೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಚುನಾವಣೆ ಹತ್ತಿರ ಬರುತ್ತಿದೆ. ಎಲೆಕ್ಷನ್‌ ಸಮಯದಲ್ಲಿ  ಈ ರೀತಿ ಮಾಡಿದಲ್ಲಿ ಬಿ-ಫಾರಂ ಸಿಗೋಲ್ಲ. ಇಂತಹ ಸಮಯದಲ್ಲಿ ಅಧಿಕಾರಿಗಳ ಜೊತೆ ಹೀಗಾ ವರ್ತಿಸೋದು? ಎಂದು ಶಾಸಕ ಶಿವಮೂರ್ತಿಗೆ ಸಿಎಂ ಸಿದ್ದರಾಮಯ್ಯ ಬೆಂಡೆತ್ತಿದ್ದಾರೆ ಎನ್ನಲಾಗಿದೆ.
 
ರಾಜೇಂದ್ರ ಕಟಾರಿಯಾ ದಕ್ಷ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದು, ಹಲವು ಮಹತ್ವದ ಹೊಣೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಸಿಎಂ ಸಿದ್ದರಾಮಯ್ಯರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ