ಕೋಟೆಕಾರು ವ್ಯವಸಾಯ ಸಂಘದಲ್ಲಿ ಮೂವರು ನಿಗೂಢ ಸಾವು

ಮಂಗಳವಾರ, 7 ನವೆಂಬರ್ 2017 (14:10 IST)
ಮಂಗಳೂರು: ಕೋಟೆಕಾರು ವ್ಯವಸಾಯ ಸಂಘದ ಶಾಖೆಯಲ್ಲಿ ಮೂವರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ತಲಪಾಡಿ ಕೆ.ಸಿ ರೋಡ್ ನಲ್ಲಿರುವ ವ್ಯವಸಾಯ ಸಂಘದ ಶಾಖೆಯಲ್ಲಿ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಉಮೇಶ್, ಸಂತೋಷ್, ಸೋಮನಾಥ್ ಎಂದು ಗುರುತಿಸಲಾಗಿದೆ.

ಮೃತರಲ್ಲಿ ಇಬ್ಬರು ಶಾಖೆಯ ಕಾವಲುಗಾರರಾಗಿದ್ದು, ಮತ್ತೋರ್ವ ಉಮೇಶ್‌ ಎಂಬಾತ ಅಯ್ಯಪ್ಪ ಸ್ವಾಮಿಯ ವ್ರತಧಾರಿ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ