ಸದನದಲ್ಲಿ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂದಾಗಿದ್ದರು. ಈ ವೇಳೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಗರಂ ಆದ ಮುಖ್ಯಮಂತ್ರಿಯವರು ಪ್ರತಿಪಕ್ಷನಾಯಕ ಈಶ್ವರಪ್ಪರನ್ನು ಸದನದಿಂದ ಹೊರಹಾಕಿ ಎಂದು ಏರುಧ್ವನಿಯಲ್ಲಿ ಸೂಚಿಸಿದರು. ಮುಖ್ಯಮಂತ್ರಿ ವರ್ತನೆಯನ್ನು ಖಂಡಿಸಿದ ಈಶ್ವರಪ್ಪ, ಸದನದಿಂದ ನನಗೆ ಹೊರ ಹೋಗಿ ಎಂದು ಹೇಳಲು ನಿವ್ಯಾರು. ಸಭಾಪತಿ ಅವರು ಹೇಳಲಿ ಹೋಗುತ್ತೇನೆ ಎಂದು ತಿರುಗೇಟು ನೀಡಿದರು.