ಅದರ ವಿಚಾರಣೆ ನಡೆಸಿದ ಸಿಜೆ ಎಸ್.ಕೆ. ಮುಖರ್ಜಿ, ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತ ಅಂದಿನ ಸಂಸ್ಥಾನವೊಂದರ ರಾಜನಾಗಿದ್ದ. ಬ್ರಿಟಿಷರು ನಿಜಾಮರ ಮೇಲೆ ದಾಳಿ ಮಾಡಿದ್ದರಿಂದ, ಅವರು ಪ್ರತಿಯಾಗಿ ಯುದ್ಧ ಮಾಡಿದ್ದಾರೆ. ಹಾಗೆಂದು ನಿಜಾಮರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಟಿಪ್ಪು ಜಯಂತಿ ಆಚರಣೆ ಸರಕಾರಕ್ಕೇ ದೊಡ್ಡ ತಲೆನೋವು. ಹೀಗಿದ್ದಾಗಲೂ ಟಿಪ್ಪು ಜಯಂತಿ ಆಚರಿಸುವ ಅಗತ್ಯವಾದರೂ ಏನಿದೆ. ಎಲ್ಲ ರಾಜರಂತೆ ಟಿಪ್ಪು ಕೂಡಾ ತಮ್ಮ ಸಂಸ್ಥಾನ ಉಳಿಸಿಕೊಳ್ಳಲು ಯುದ್ಧ ಮಾಡಿದ್ದಾರೆ. ಹಾಗಾಗಿ ಟಿಪ್ಪು ಶಾಂತಿಯಿಂದ ವಿರಮಿಸಲಿ ಎಂದು ಸಿಜೆ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಅರ್ಜಿ ವಿಚಾರಣೆ ಇವತ್ತು ಮತ್ತೆ ಕೈಗೆತ್ತಿಕೊಳ್ಳಲಿದ್ದು, ನ್ಯಾಯಾಲಯದ ಆದೇಶ ಏನು ಎಂಬುದು ಕುತೂಹಲವಾಗಿದೆ.