ಇಂದು ಬೆಂಗಳೂರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮನ; ಅಮಿತ್ ಶಾ ಭೇಟಿ ಬಿಜೆಪಿಗೆ ವರದಾನವಾಗಲಿದೆಯಾ...?
ಇಂದು ಅಮಿತ್ ಶಾ ಅವರು ವಿವಿಧ ಸಭೆಗಳನ್ನು ಕರೆದು, ಎಂ.ಪಿ, ಎಂ.ಎಲ್.ಎ. ಗಳ ಜೊತೆ ಚುನಾವಣೆಗೆ ಸಂಬಂಧಿಸಿದಂತೆ ಹಲವು ಬಗೆಯ ಚರ್ಚೆಗಳನ್ನು ನಡೆಸಲಿದ್ದಾರೆ. ಹಾಗೆ 224 ಅಸೆಂಬ್ಲಿ ಕ್ಷೇತ್ರಗಳ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟು ನೀಡುವ ಕುರಿತು ಅಮಿತ್ ಶಾ ಅವರು ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದಾರೆ.