ಮಂಡ್ಯದಲ್ಲಿ ಎರಡು ಮುಗ್ಧ ಮಕ್ಕಳ ಅಕಾಲಿಕ ಸಾವು

ಶನಿವಾರ, 10 ಫೆಬ್ರವರಿ 2018 (11:47 IST)
ಮಂಡ್ಯ: ಚುಚ್ಚುಮದ್ದಿಗೆ ಇಬ್ಬರು ಮಕ್ಕಳು ಬಲಿಯಾದ ಘಟನೆ ಮಂಡ್ಯ ತಾಲೂಕಿನ ಚಿಂದಗಿರಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಇಬ್ಬರು ಮಕ್ಕಳು ಸಾವು, ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. 2 ವರ್ಷದ ಪ್ರೀತಂ, ಭುವನ್ ಮೃತ ಕಂದಮ್ಮಗಳು.


ಮಕ್ಕಳಿಗೆ ಪೆಂಟೋವೇಲೆಂಟ್ ಇಂಜೆಕ್ಷನ್ ಅನ್ನು ವೈದ್ಯರು ಕೊಟ್ಟಿದ್ದರು. ಗುರುವಾರ ಒಟ್ಟು 9 ಮಕ್ಕಳಿಗೆ ಚುಚ್ಚುಮದ್ದನ್ನು ವೈದ್ಯರು ನೀಡಿದ್ದರು. ಅಸ್ವಸ್ಥ ಐವರು ಮಕ್ಕಳಿಗೆ ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚುಚ್ಚುಮದ್ದಿನಿಂದಲೇ ಹಸುಳೆಗಳು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ