ಆಸ್ತಿಗಾಗಿ ಬೀಳಲಿದ್ದ ಎರಡು ಹೆಣಗಳು; ಅದೃಷ್ಟವಶಾತ್ ಪಾರು

ಗುರುವಾರ, 13 ಜೂನ್ 2019 (18:08 IST)
ಆಸ್ತಿ ವಿವಾದದ ಹಿನ್ನಲೆಯಲ್ಲಿ ಇಬ್ಬರ ರೈತರ ಜೊತೆಗೆ ಮಾಜಿ ಯೋಧನ  ಕೊಲೆಗೆ ಯತ್ನ ನಡೆದಿದೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಂಜೆ ಹೊಲದಲ್ಲಿ ಎಂದಿನಂತೆ ಕೆಲಸ ಮಾಡುವಾಗ ಮಾರಕಾಸ್ತ್ರಗಳಿಂದ ಉಳಪ್ಪ ಮುಕಾಶಿ, ಅಶೋಕ ಮುಕಾಶಿ, ಮಡಿವಾಳ ಮುಕಾಶಿ, ಅಶೋಕ ಸೇರಿದಂತೆ 15 ಜನರ ಗುಂಪು ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಹಲ್ಲೆಗೊಳಗಾದ ಅಶೋಕ ಪಾಟೀಲ, ಶಿವನಗೌಡ ಪಾಟೀಲ ಇಬ್ಬರು ಈಗ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಕುರಿತು ಕಿತ್ತೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಕ್ಯಾರೆ ಎನ್ನದ ಕಿತ್ತೂರು ಪೊಲೀಸರ ವಿರುದ್ದ ನೊಂದ ಕುಟುಂಬದವರು ಹಿಡಿಶಾಪ ಹಾಕಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ