ಒಂದು ಹುಡುಗಿಗಾಗಿ ರೋಡ್‌ ಮಧ್ಯದಲ್ಲೇ ಹೊಡೆದಾಡಿಕೊಂಡ ಇಬ್ಬರು ಯುವಕರು

Sampriya

ಶುಕ್ರವಾರ, 23 ಆಗಸ್ಟ್ 2024 (19:59 IST)
ರಾಮನಗರ: ಒಬ್ಬಳು ಯುವತಿಗಾಗಿ ರೋಡ್‌ ಮಧ್ಯದಲ್ಲೇ ಲಾಂಗ್ ಹಿಡಿದು ಹೊಡೆದಾಡಿಕೊಂಡಘಟನೆ ರಾಮನಗರ ಪಟ್ಟಣದ, ಐಜೂರ್ ಸರ್ಕಲ್‌ನಲ್ಲಿ ನಡೆದಿದೆ.

ಬೇರೆ ಬೇರೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ತನ್ನ ಗೆಳತಿಗೆ ನೀನ್ಯಾಕೆ ಮೆಸೇಜ್ ಮಾಡುತ್ತಿಯಾ ಎಂದು ಪ್ರಶ್ನೆ ಮಾಡಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಒಬ್ಬ ಯುವತಿಯನ್ನು ಇಬ್ಬರು ಯುವಕರು ಪ್ರೀತಿ ಮಾಡುತ್ತಿದ್ದು, ಇದರಿಂದ ಇಬ್ಬರಲ್ಲಿ ಕಿರಿಕ್ ಶುರುವಾಗಿದೆ. ತನ್ನ ಗೆಳತಿಗೆ ನೀನ್ಯಾಕೆ ಮೆಸೇಜ್ ಮಾಡಿದೆ ಎಂದು ಪ್ರಶ್ನಿಸಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಇಬ್ಬರ ಜಗಳನ್ನು ಬಿಡಿಸಲು ಅಲ್ಲಿದ್ದವರು ಹರಸಾಹಸ ಪಟ್ಟಿದ್ದಾರೆ. ಇದೇ ತಿಂಗಳ 18ರಂದು ಈ ಘಟನೆ ನಡೆದಿದ್ದು, ಯುವಕರ ಹೊಡೆದಾಡ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ