ಯಾವುದೇ ಕಾಮಗಾರಿಗಳಿಗೆ ಪ್ರಚಾರ ಪಡೆಯಲಿಲ್ಲ ಎಂದ ಕೇಂದ್ರ ಸಚಿವ!

ಗುರುವಾರ, 21 ಫೆಬ್ರವರಿ 2019 (15:37 IST)
ನಾನು ಹಲವಾರು ಯೋಜನೆಗಳನ್ನು‌ ರೂಪಿಸಿದ್ದೇನೆ. ಕುಡಿಯುವ ನೀರು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದೇನೆ.
ಆದರೆ ನನ್ನ ದಡ್ಡತನ ನಾನು ಯಾವುದೇ ಕಾಮಗಾರಿಗಳಿಗೆ ಪ್ರಚಾರ ಪಡೆಯಲಿಲ್ಲ. ಹೀಗಂತ ಕೇಂದ್ರ ಸಚಿವ ಹೇಳಿಕೊಂಡಿದ್ದಾರೆ.

ವಿಜಯಪುರದಲ್ಲಿ ರೇಲ್ವೇ ಮೇಲ್ ಸೇತುವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ‌ ಮೋದಿ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಾಗಾರಿಯಾಗುತ್ತಿದೆ.

ಮೊದಲಿನ ಸರ್ಕಾರದಲ್ಲಿ ಯಾವುದೇ ಅಭಿವೃದ್ದಿ ಕಾಮಾಗಾರಿಗಳಾಗಿಲ್ಲ. ಮೋದಿ ನೇತೃತ್ವದ ಸರ್ಕಾರದಲ್ಲಿ ಯಾವುದೇ ಲಫಡಾ ಬಾಜಿ ಆಗಿಲ್ಲ, ಯಾವುದೇ ಅವ್ಯವಹಾರ ಆಗಿಲ್ಲ ಎಂದರು.

ನಾನು‌ ನನ್ನ ಆತ್ಮ‌ ಸಾಕ್ಷಿಗಾಗಿ‌ ಕೆಲಸಗಳನ್ನು ಮಾಡಿದ್ದೇನೆ. ನಾನು ಇವತ್ತಲ್ಲ ನಾಳೆ ಮತ್ತೆ ರಾಜ್ಯ ರಾಜಕಾರಣ ಬರುತ್ತೇನೆ. ಅದು ಸದ್ಯಕ್ಕೆ ಪ್ರಶ್ನಾತೀತವಾಗಿದೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ