ಹುಟ್ಟುಹಬ್ಬದ ದಿನ ಮಕ್ಕಳ ಜೊತೆ ತಿಂಡಿ, ದಾನ ಧರ್ಮ ಮಾಡಿದ ಬಿಎಸ್ ಯಡಿಯೂರಪ್ಪ Video
ಇಂದು ಬೆಳಗ್ಗೆ ಶಿಕಾರಿಪುರದ ಆರಾಧ್ಯದೈವ, ಐತಿಹಾಸಿಕ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಂತರ ದಿವ್ಯಾಂಗರಿಗೆ ವಾಹನವಾಹನಗಳನ್ನು ಹಾಗೂ ತಾಯಂದಿರಿಗೆ, ಸಹೋದರಿಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಇನ್ನು ದೇವಾಲಯದ ಅರ್ಚಕರು, ಚೆಂಡೆ ವಾದಕರಿಗೂ ಬಿಎಸ್ ವೈ ದಕ್ಷಿಣೆ ನೀಡಿದರು.
ಇನ್ನು ಪೂಜೆ, ದಾನ ಧರ್ಮಗಳ ಬಳಿಕ ಬಿಎಸ್ ವೈ ತಮ್ಮ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ ಜೊತೆಗೇ ಕೂತು ತಿಂಡಿ ಸವಿದಿದ್ದಾರೆ. ಈ ನಡುವೆ ಸಾಕಷ್ಟು ಜನ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ.