ಗಡಿನಾಡಿಗೆ ಕ್ರಿಕೆಟರ್ಸ್ ಭೇಟಿ

ಶುಕ್ರವಾರ, 11 ಜನವರಿ 2019 (18:31 IST)
ಗಡಿನಾಡಿಗೆ ಕ್ರಿಕೆಟರ್ಸ್ ಭೇಟಿ ನೀಡಿದರು. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರನ್ನು ಕಂಡು ಬ್ಯಾಟ್ ಮೇಲೆ ಆಟೋಗ್ರಾಫ್ ಪಡೆದುಕೊಂಡರು.

ಗಡಿನಾಡು ಬೀದರ್ ಜಿಲ್ಲೆಗೆ ಕ್ರಿಕೆಟ್ ಮಾಜಿ ಆಟಗಾರರಾದ ಸುನಿಲ್ ಜೋಷಿ ಹಾಗೂ ವೆಂಕಟೇಶ್ ಪ್ರಸಾದ್ ಭೆಟಿ ನೀಡಿದರು. ಕೆನರಾ ಬ್ಯಾಂಕ್ ಗೆ ನೂತನವಾಗಿ ಅಂಬಾಸಿಡರ್ ಆಗಿರುವ ಇಬ್ಬರು ಅಂತರಾಷ್ಟ್ರೀಯ  ಕ್ರಿಕೆಟ್ ಮಾಜಿ ಆಟಗಾರರು ನಗರದಲ್ಲಿನ ಕೆನರಾ ಬ್ಯಾಂಕ್ ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಸಿದ್ಧ ಗುರುನಾನಕ್ ದೇವ್ ದೇವಸ್ಥಾನಕ್ಕೆ ಭೇಟಿ ನೀಡಿದರು.

ಈ ವೇಳೆ ನೆಚ್ಚಿನ ಕ್ರಿಕೆಟ್ ಆಟಗಾರರನ್ನು ಕಂಡ ಕ್ರೀಡಾಪಟುಗಳು ಪೋಟೊ ತೆಗೆದುಕೊಳ್ಳುವುದಕ್ಕೆ ಮುಗಿಬಿದ್ದರು. ಶಾಲಾ ಪ್ರವಾಸಕ್ಕೆ ಬಂದ ಮಕ್ಕಳೊಂದಿಗೆ ಮಾಜಿ ಆಟಗಾರರಾದ ಸುನೀಲ್ ಜೋಷಿ ಹಾಗೂ ವೇಂಕಟೆಶ್ ಪ್ರಸಾದ್ ಕೆಲ ಕಾಲ ಮಾತನಾಡಿದರು. ಇನ್ನು ಕ್ರೀಡಾಪಟುಗಳಿಗೆ ಬ್ಯಾಟ್ ಮೇಲೆ ತಮ್ಮ ಆಟೋಗ್ರಾಫ್ ನೀಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ