ತವರಿನ ತಂಡಕ್ಕೆ ನೋ ಎಂದ ಧೋನಿ: ಸಿಟ್ಟಾದ ಬಿಸಿಸಿಐ ಆಯ್ಕೆಗಾರರು

ಭಾನುವಾರ, 14 ಅಕ್ಟೋಬರ್ 2018 (08:06 IST)
ಮುಂಬೈ: ತವರು ಜಾರ್ಖಂಡ್ ಪರ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡಲು ಒಲ್ಲೆ ಎಂದಿದ್ದಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಧೋನಿ ವಿರುದ್ಧ ಬಿಸಿಸಿಐ ಆಯ್ಕೆಗಾರರು ಸಿಟ್ಟಿಗೆದ್ದಿದ್ದಾರೆ.

ಸೀಮಿತ ಓವರ್ ಗಳಲ್ಲಿ ಮಾತ್ರ ಆಡುತ್ತಿರುವ ಧೋನಿ ಇತ್ತೀಚೆಗೆ ಬ್ಯಾಟಿಂಗ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹಾಗಿದ್ದರೂ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.

ರಾಷ್ಟ್ರೀಯ ತಂಡ ಪ್ರತಿನಿಧಿಸುವ ಮೊದಲು ದೇಶೀಯ ಕ್ರಿಕೆಟ್ ನಲ್ಲಿ ಆಡುವ ಪ್ರಸ್ತಾಪವನ್ನು ಧೋನಿ ತಿರಸ್ಕರಿಸಿದ್ದಾರೆ. ಇದು ಆಯ್ಕೆಗಾರರ ಮುಖ ಕೆಂಪಗಾಗಿಸಿದೆ. ಇದಕ್ಕೂ ಮೊದಲು ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಧೋನಿ ಜಾರ್ಖಂಡ್ ಪರ ಆಡಲಿದ್ದಾರೆ ಎಂದಿದ್ದರು. ಆದರೆ ಜಾರ್ಖಂಡ್ ಕೋಚ್ ರಾಜೀವ್ ಕುಮಾರ್ ಧೋನಿ ಆಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಇಬ್ಬರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ