ರಾಜಕೀಯ ಹಿತಕ್ಕಾಗಿ ತಮಿಳುನಾಡಿಗೆ ನೀರು- ಚಕ್ರವತಿ ಸೂಲಿಬೆಲೆ

ಶನಿವಾರ, 30 ಸೆಪ್ಟಂಬರ್ 2023 (17:00 IST)
ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕನ್ನು ಹಾಳು ಮಾಡಿ ತಮಿಳುನಾಡಿನೊಂದಿಗೆ ರಾಜಕೀಯ ಹಿತಾಸಕ್ತಿಯನ್ನು ಪ್ರದರ್ಶಿಸುತ್ತಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ಧಾರೆ. ನಮ್ಮಲ್ಲಿ ನೀರಿಲ್ಲ, ‘ನೀರು ಬಿಡುಗಡೆ ಸಾಧ್ಯವೇ ಇಲ್ಲ’ ಎಂದು ಹೇಳುವ ಧೈರ್ಯವನ್ನೇ ರಾಜ್ಯಸರ್ಕಾರ ಇದುವರೆಗೂ ಪ್ರದರ್ಶಿಸಿಲ್ಲ. ಆದೇಶಗಳನ್ನು ಪಾಲಿಸುತ್ತಾ ನೀರು ಬಿಡುಗಡೆ ಮಾಡುತ್ತಲೇ ಇದೆ. ವಿವಾದದಲ್ಲಿ ತಮಿಳುನಾಡು ಸಿಎಂ ಮತ್ತು ಕರ್ನಾಟಕದ ಸಿಎಂ ನಡುವೆ ಜಗಳವೇ ಇಲ್ಲ. ಅಂದ ಮೇಲೆ ಪ್ರಧಾನಿ ಮಧ್ಯಸ್ಥಿಕೆ ವಹಿಸುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ