ಯಾರೇ ಸಿಎಂ ಆದರೂ ನಮಗೆ ಸಂತೋಷ

ಗುರುವಾರ, 18 ಮೇ 2023 (14:20 IST)
ವಿರೋಧ ಪಕ್ಷದಲ್ಲಿರುವ ಮಾಜಿ ಶಾಸಕ ಸುಧಾಕರ್​ ಹಾಗೂ ಮಾಜಿ ಸಚಿವ ಎಸ್.​ಟಿ ಸೊಮಶೇಖರ್​ ಯಾವ ಕಾರಣಕ್ಕೆ ಟ್ಟೀಟ್​​​ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕುಣಿಗಲ್​​​​ ಶಾಸಕ ರಂಗನಾಥ್​​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಅಡಿದ ಅವರು, ನಮ್ಮ ಸಿದ್ದರಾಮಯ್ಯನವರು ಕಾಂಗ್ರೆಸ್​ ಪಕ್ಷ ಕಟ್ಟಿ ಬೆಳೆಸಿದವರು.. ಯಾವತ್ತು ಕೂಡ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ.. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​​ ಪಕ್ಷ ಕಟ್ಟಿ ಬೆಳೆಸುವ ಮೂಲಕ ಇಂದು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದ್ರು.. ನಮ್ಮ ಪಕ್ಷದಲ್ಲಿ ಯಾರೇ ಮುಖ್ಯಮಂತ್ರಿಯಾದರು ಅವರು ನಮ್ಮ ನಾಯಕರು ಹಾಗೂ ನಮ್ಮ ಕಾಂಗ್ರೆಸ್ ಪಕ್ಷದ ಕುಟುಂಬದವರು ಯಾರೇ ಸಿಎಂ ಆದರೂ ನಮಗೆ ಸಂತೋಷವಿದೆ. ಡಿ.ಕೆ ಶಿವಕುಮಾರ್​​ ಕೂಡ KPCC ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಗಲಿರುಳು ದುಡಿದ್ದಿದ್ದಾರೆ. ಯಾರೇ ಸಿಎಂ ಆದರೂ ನಮಗೆ ಸಂತೋಷವಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ