ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಯೋಚನೆ ಮಾಡ್ತಿದ್ದೇವೆ- ಡಿಕೆ ಶಿವಕುಮಾರ್

ಬುಧವಾರ, 22 ನವೆಂಬರ್ 2023 (16:41 IST)
ನಿಗಮ ಮಂಡಳಿ ನೇಮಕ ವಿಚಾರವಾಗಿ ನಾವು ಲೀಡರ್ಸ್ ಗಳು ಚರ್ಚೆ ನಡೆಸುತ್ತಿದ್ದೇವೆ.ಕೆಲವು ಸೀನಿಯರ್ ಲೀಡರ್ಸ್ ಗಳನ್ನ ಶಾಸಕರ ಅಭಿಪ್ರಾಯ ಪಡೆದುಕೊಳ್ಳಬೇಕು.ಮತ್ತೆ 28 ಕ್ಕೆ ವೀಕ್ಷಕರು ರಾಜ್ಯಕ್ಕೆ ಬರ್ತಿದ್ದಾರೆ.ನಾನು ಸಿಎಂ ತೆಲಂಗಾಣ ಎಲೆಕ್ಷನ್ ಗೆ ಹೋಗಬೇಕು.28 ಆದ್ಮೇಲೆ ನಮ್ಮ ಲಿಸ್ಟ್ ನ ಹೈಕಮಾಂಡ್  ಗೆ ಕಳಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ಪರಮೇಶ್ವರ ಅಸಮಾಧಾನ ವಿಚಾರವಾಗಿ ಅವರು ಮೂರು ದಿವಸ ಟೂರ್ ನಲ್ಲಿ ಇದ್ರು.ಬೇರೆ ಬೇರೆ ಏನ್ ಏನೋ ಕೆಲಸಗಳು ಇರುತ್ವೆ‌.ಏನಕ್ಕೆ ಅಸಮಾಧಾನ..?ಅಸಮಾಧಾನ ಆಗುವಂತದ್ದು ಏನಿದೆ ಇಲ್ಲಿ..?ಇಡೀ ಕಾಂಗ್ರೆಸ್ ಒಂದು.ಯಾರದ್ದು ಯಾರ ಬೆಂಬಲಿಗರು ಇಲ್ಲ.ನಂಗೂ ಇಲ್ಲ ಸಿಎಂ ಗೂ ಇಲ್ಲ ಹೋಮ್ ಮಿನಿಸ್ಟರ್ ಗೂ ಇಲ್ಲ.ಎಲ್ಲಾ ಇಡೀ ಕಾಂಗ್ರೆಸ್ ಬೆಂಬಲಗರು ಒಂದು.ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಯೋಚನೆ ಮಾಡ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ