ಗೆಲ್ಲುವಂತಹವರಿಗೆ ಮೊದಲು ನಾವು ಟಿಕೆಟ್ ಕೊಡಬೇಕು ಈ ಸ್ಟೇಟರ್ಜಿ ಬಳಸಿ ಗೆದ್ದಿದ್ದಾರೆ..!

ಗುರುವಾರ, 8 ಡಿಸೆಂಬರ್ 2022 (15:40 IST)
ಒಂದು ಕಡೆ ನಾವು ಗೆದಿದ್ದೇವೆ.ನಾವು ನಿರೀಕ್ಷೆ ಮಾಡಿರಲಿಲ್ಲ ಇಷ್ಟು ಅಂತರದಿಂದ ಸೋಲುತ್ತೇವೆ ಅಂತ.AAP 7 ಸ್ಥಾನವನ್ನು ಪಡೆದರು ಸಹ ನಮ್ಮ ಮತಗಳನ್ನ ಪಡೆದಿದ್ದಾರೆ.ಜೆಡಿಎಸ್ ನಿಂದ ನಮಗೇ ಏನೂ ತೊಂದರೆ ಇಲ್ಲ.ಅವರು ಗೆಲ್ಲೊ ಕಡೆ ಅವರು ಗೆಲ್ಲುತ್ತಾರೆ ನಾವು ಗೆಲ್ಲುವ ಕಡೆ ನಾವೇ ಗೆಲುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ
 
ಇನ್ನೂ ಕ್ಲಾಶ್ ಆಗುವಂತಹ ಸಂಭವ ಕಡಿಮೆ.ನಾವು ಸೆಕ್ಯುಲರ್ ವೋಟ್ ಗಳು ಬದಲಾವಣೆಯಾಗಿದೆ.ಈಗ ಪಕ್ಕದ ರಾಜ್ಯಗಳು ಕೇರಳ, ತಮಿಳುನಾಡು , ಆಂಧ್ರ ಈ ತರಹ ಇದೆ .ಯಾವುದೇ ಹೊಸ ಪಕ್ಷ ಬಂದ್ರೆ ಸಾಮಾನ್ಯವಾಗಿ ಸೆಕ್ಯುಲರ್ ವೋಟ್ ಗಳನ್ನ  ಸೆಳೆಯುತ್ತಾರೆ.ಮುಸ್ಲಿಂ ಆಗಬಹುದು ಯಾರೇ ಆಗಬಹುದು ಎಲ್ಲರಿಗೂ ಒಂದೆ ಸ್ಥಾನ ಮಾನವನ್ನು ಕೊಡುತ್ತೆ.ಗೆಲ್ಲುವಂತಹವರಿಗೆ ಮೊದಲು ನಾವು ಟಿಕೆಟ್ ಕೊಡಬೇಕು.ಬಿಜೆಪಿ ಅವರು ಇದೇ ಸ್ಟೇಟರ್ಜಿ ಬಳಸಿಯೇ ಗೆದಿದ್ದು .ಪಕ್ಷ ಕರ್ನಾಟಕದಲ್ಲಿ ಅಧಿಕಾರ ಬರಬೇಕಾದರೆ ಈ ತರಹದು ಎಲ್ಲ ಮಾಡಬೇಕು.ಮೋದಿ ಅವರು ಆಂಬುಲೆನ್ಸ್ ಬಂದಾಗ ದಾರಿ ಬಿಡೋದು ಈ ತರಹ ಸ್ಟ್ಯಾಟರ್ಜಿ ಮಾಡುತ್ತಾರೆ.ನಮ್ಮ ಕಾಂಗ್ರೆಸ್ ನವರು ಈ ತರಹ ಮಾಡಲ್ಲ ಎಂದು ಮೋದಿಯ ಬಗ್ಗೆ ಸತೀಶ್ ಜಾರಕಿಹೊಳಿ ಹೊಗಲಿದ್ದಾರೆ
 
ಇಲ್ಲಿನ ಸಂಸ್ಕೃತಿ ರಾಜಕೀಯ ಬೇರೆ ಇದೇ.ಅಲ್ಲಿನ ಆಚಾರ ವಿಚಾರಗಳು ಸಹ ಬೆರೆ ತರಹ ಇದೆ.ನಾರ್ತ್ ಇಂಡಿಯ ಚುನಾವಣೆಯೇ ಬೇರೆ ಇದೇ,ಸೌತ್ ಇಂಡಿಯಾ ಚುನಾವಣೆಯೇ ಬೇರೆ ಇದೇ ಆ ರಾಜ್ಯಕ್ಕೂ ಇಲ್ಲಿಗೂ ಏನೂ ಇಂಪ್ಯಾಕ್ಟ್ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ