ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದಳಿಗೆ ಎಂಥಾ ಗತಿ ಬಂತು? ಶಾಕಿಂಗ್!

ಮಂಗಳವಾರ, 26 ಫೆಬ್ರವರಿ 2019 (16:26 IST)
ಮನೆಯಲ್ಲಿ ಯಾರೂ ಇಲ್ಲದಿರುವನ್ನು ನೋಡಿಕೊಂಡಿದ್ದ ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳ ಮೇಲೆ ದೌರ್ಜನ್ಯ ಮೆರೆದು ಪರಾರಿಯಾದ ಘಟನೆ ನಡೆದಿದೆ.

ರಾತ್ರೋ ರಾತ್ರಿ ಮನೆಗೆ ನುಗ್ಗಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮಚ್ಚಿನಿಂದ ಯುವತಿಯ ಮುಖ, ಕೈ ಕೊಚ್ಚಿದ ಯುವಕ ಪರಾರಿಯಾಗಿದ್ದಾನೆ.

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಘಟನೆ ನಡೆದಿದ್ದು, ಮಮತ(22) ಹಲ್ಲೆಗೊಳಗಾದ ಗೃಹಿಣಿಯಾಗಿದ್ದಾರೆ.
ಸಕಲೇಶಪುರದ ವಿನೋಬಾ ರಸ್ತೆಯಲ್ಲಿರುವ ಮಮತ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ.  

2 ವರ್ಷಗಳ ಹಿಂದೆ ಮುಸ್ಲಿಂ ಯುವಕನನ್ನು ಮಮತ ಮದುವೆಯಾಗಿದ್ದಳು. ಇವರು ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೇ ಹಳೆ ಪ್ರೇಮಿಯೊಬ್ಬನಿಂದ ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

ಮುಸ್ಲಿಂ ಹುಡುಗನನ್ನು ಮದುವೆಯಾಗಿರುವುದಕ್ಕೆ ಸಂಘಟನೆಯವರು ಯಾರಾದರೂ ಹಲ್ಲೆ ನಡೆಸಿರುವ ಅನುಮಾನ ವ್ಯಕ್ತವಾಗುತ್ತಿದೆ. ಮಮತ ಸ್ಥಿತಿ ಗಂಭೀರವಾಗಿದ್ದು, ಹಾಸನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ