ನೂತನ ಎಂಎಲ್ಸಿ ಮನೆಗೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದೇನು?

ಮಂಗಳವಾರ, 28 ಜುಲೈ 2020 (17:09 IST)
ವಿಧಾನ ಪರಿಷತ್ ಗೆ ನೂತನವಾಗಿ ನಾಮನಿರ್ದೇಶನಗೊಂಡವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಟೀಲ್, ಅಕ್ಷರವನ್ನೇ ಕಾಣದ ಸಮುದಾಯಕ್ಕೆ ಅಕ್ಷರದ ಬೆಳಕಾಗಿ ಕೆಲಸ ಮಾಡಿಕೊಂಡು ಬಂದವರು ಶಾಂತಾರಾಮ ಸಿದ್ದಿ. ಈ ದೇಶದಲ್ಲಿರುವ ವನವಾಸಿಗಳಿಗೆ ಹತ್ತಾರು ಬುಡಕಟ್ಟು ಜನಾಂಗಗಳಿಗೆ ಅಲ್ಲಿರುವಂತಹ ಸಮಸ್ಯೆಗಳನ್ನು ಪರಿಷತ್ ಮೂಲಕ ಅವರ ಧ್ವನಿಗಳಿಗೆ, ಚಿಂತನೆಗೆ ಶಕ್ತಿ ತುಂಬಿ ನಿವಾರಣೆ ಮಾಡುವ ಕಾರ್ಯ ಅವರಿಂದಾಗಲಿ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ