ಡಿಕೆ ಶಿವಕುಮಾರ್ ಬಿಡುಗಡೆಗೆ ಮುಸ್ಲಿಂರು ಮಾಡಿದ್ದೇನು?

ಬುಧವಾರ, 25 ಸೆಪ್ಟಂಬರ್ 2019 (19:41 IST)
ಇಡಿ ಬಂಧನದಲ್ಲಿರೋ ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಿಡುಗಡೆಗೊಳಿಸುವಂತೆ ಮುಸ್ಲಿಂ ಸಮುದಾಯ ಒತ್ತಾಯ ಮಾಡಿದೆ.

ಡಿಕೆಶಿ ಬಿಡುಗಡೆಗೊಳ್ಳಬೇಕೆಂದು ಮುಸ್ಲಿಂ ಬಾಂಧವರು ಪ್ರಾರ್ಥನೆ  ಸಲ್ಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಹಿನ್ನೆಯಲ್ಲಿ ಪ್ರಾರ್ಥನೆ ಮಾಡಿದ್ದಾರೆ.  

ಮಸೀದಿಯಲ್ಲಿ ಜಮಾಯಿಸಿದ ನೂರಾರು ಅಲ್ಪಸಂಖ್ಯಾತ ಸಮುದಾಯದವರು, ಡಿ ಕೆ ಶಿವಕುಮಾರ್ ಪರ ತೀರ್ಪು ಬರುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ರು.  

ಶಿಡ್ಲಘಟ್ಟ ಮೈನಾರಿಟಿ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆ ಇದಾಗಿತ್ತು.  

ಶಿಡ್ಲಘಟ್ಟ ನಗರದ ಹಜರತ್ ಹುಸೇನಿ ಸರಮಸ್ ಷಾವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದರ್ಗಾದಲ್ಲಿ ಮುಸ್ಲಿಂ ಸಮುದಾಯದವರಿಂದ ಪ್ರಾರ್ಥನೆ ನಡೆಯಿತು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ