ಮೈದುಂಬಿದ ಕೆರೆಯಲ್ಲಿ ಮಾಡಿದ್ದೇನು?

ಶುಕ್ರವಾರ, 15 ನವೆಂಬರ್ 2019 (15:25 IST)
ಮೈದುಂಬಿಕೊಂಡಿರೋ ಕೆರೆಯಲ್ಲಿ ಖುಷಿಯಿಂದ ಈ ಕೆಲಸ ಮಾಡಲಾಗಿದೆ.

ಮಂಡ್ಯದ ಬಿಂಡೇನಹಳ್ಳಿ ಕೆರೆಯಲ್ಲಿ ತ್ರಿಕೂಟ ದೇವರ ತೆಪ್ಪೋತ್ಸವ ಮತ್ತು ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ವೈಭವದಿಂದ ಜರುಗಿತು.

ವೇಣುಗೋಪಾಲ ಸ್ವಾಮಿ, ಬೋರೇದೇವರು, ಮಾರಮ್ಮ ದೇವರುಗಳನ್ನು ವಿವಿಧ ಪೂಜಾ ಕಾರ್ಯಗಳ ನಂತರ ಮೆರವಣಿಗೆ ನಡೆಸಲಾಯಿತು. ಕೆರೆಯಲ್ಲಿ ತೆಪ್ಪೋತ್ಸವ ಮಾಡಲಾಯಿತು. 

ಅಲ್ಲದೇ ತೆಪ್ಪೋತ್ಸವದಲ್ಲಿ ವೀರಗಾಸೆ, ಪೂಜಾ ಕುಣಿತ ಮತ್ತು ತಮಟೆ ತಂಡಗಳು ಭಾಗವಹಿಸಿ ಗಮನ ಸೆಳೆದವು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ