ಜಾರಕಿಹೊಳಿ, ಕುಮಠಳ್ಳಿ ಬೆಂಬಲಿಗರು ಹೀಗೆ ಮಾಡೋದಾ?

ಬುಧವಾರ, 13 ನವೆಂಬರ್ 2019 (13:56 IST)
ಅನರ್ಹ ಶಾಸಕರು ಉಪ ಚುನಾವಣೆ ಸ್ಪರ್ಧೆ ಮಾಡಬಹುದು ಅಂತ ಸುಪ್ರೀಂ ಕೋರ್ಟ್ ನೀಡಿರೋ ತೀರ್ಪು ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಬೆಂಬಲಿಗರು ಫುಲ್ ಖುಷ್ ಆಗಿದ್ದಾರೆ.

ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆದಿದೆ. ಕಾರ್ಯಕರ್ತರು, ಮುಖಂಡರು ಪರಸ್ಪರ ಸಿಹಿ ಹಂಚಿದ್ದಾರೆ.
ರಮೇಶ್ ಜಾರಕಿಹೋಳಿ ಮತ್ತು ಮಹೇಶ ಕುಮಠಳ್ಳಿ ಪರವಾಗಿ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ.

ಮಹೇಶ್ ಕುಮಠಳ್ಳಿ ಮನೆ ಎದುರು ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿ ತೀರ್ಪು ನೀಡಿರೋ ಹಿನ್ನೆಲೆಯಲ್ಲಿ ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ