ಕುಡಿತ ಮತ್ತಿನಲ್ಲಿದ್ದ ರೌಡಿ ಶೀಟರ್ ಗೆ ಆಗಿದ್ದೇನು? ಶಾಕಿಂಗ್

ಶನಿವಾರ, 2 ನವೆಂಬರ್ 2019 (18:09 IST)
ಕುಡಿತದ ಮತ್ತಿನಲ್ಲಿ ಇದ್ದ ರೌಡಿ ಶೀಟರ್ ಗೆ ಆಗಬಾರದ್ದು ಆಗಿ ಹೋಗಿದೆ.

ನಶೆಯಲ್ಲಿದ್ದ ರೌಡಿ ಶೀಟರ್ ನ ತಲೆ ಮೇಲೆ ಆತನ ಗೆಳೆಯನೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರೋ ಘಟನೆ ನಡೆದಿದೆ.

ತುಮಕೂರು ಹೊರವಲಯದ ಬೆಳಗುಂಬ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾನಗರದ ಮೋಹನ್ ಕುಮಾರ್ ಅಲಿಯಾಸ್ ಚಟ್ಟಕುಮಾರ್ (35) ಕೊಲೆಯಾಗಿರೋ ರೌಡಿ ಶೀಟರ್.

ಟೆಂಪೋ ರಾಜನ ಜೊತೆಗೆ ಮೋಹನ ಕುಮಾರ್ ಕುಡಿತದ ಮತ್ತಿನಲ್ಲಿ ಜಗಳ ತೆಗೆದಿದ್ದಾನೆ. ಅದು ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.

ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ