ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಗೆ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

ಶುಕ್ರವಾರ, 5 ಜನವರಿ 2018 (12:18 IST)
ಬೆಂಗಳೂರು : ರಾಜ್ಯದ ಕಲ್ಲಿದ್ದಲು ಪೂರೈಕೆ ವಿಷಯ ಚರ್ಚಿಸಿಲ್ಲ ಎಂಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ  ಹೇಳಿಕೆಗೆ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.


‘ಇಂಧನ ಇಲಾಖೆಯಲ್ಲಿ ನಾನು ರಾಜಕೀಯ ಬೆರೆಸಿಲ್ಲ. ಮಹಾರಾಷ್ಟ್ರದಿಂದ ನಮಗೆ ಕೋಲ್ ಬ್ಲಾಕ್ ಮಂಜೂರಾಗಿತ್ತು. ಕಲ್ಲಿದ್ದಲು ಸಾಗಾಣಿಕೆಗೆ ಟೆಂಡರ್ ಕರೆಯಲು ಉದ್ದೇಶಿಸಿದ್ದೇವು. ಆದರೆ ಕೆಲವರು ನ್ಯಾಯಾಲಯಕ್ಕೆ ಹೋದ ಕಾರಣ ಹಿನ್ನಡೆಯಾಗಿದೆ. ಹೀಗಾಗಿ ಕೋಲ್ ಬ್ಲಾಕ್ ಬಳಸಲು ಆಗುತ್ತಿಲ್ಲ. ಈಗ ಮಹಾರಾಷ್ಟ್ರದ ಒತ್ತಡ ಹೆಚ್ಚಿದೆ. ಕೋಲ್ ಬ್ಲಾಕ್ ರದ್ದು ಮಾಡಲು ನಮಗೆ ನೋಟಿಸು ನೀಡಿದ್ದಾರೆ. ಅದಕ್ಕೆ ನಾವು ಉತ್ತರ ನೀಡಿದ್ದೇವೆ’ ಎಂದು ಬೆಂಗಳೂರಿನಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ