ಕೊರೊನಾ ವೈರಸ್ 7 ಸೋಂಕಿತರ ಆರೋಗ್ಯ ಹೇಗಿದೆ ಗೊತ್ತಾ?

ಸೋಮವಾರ, 30 ಮಾರ್ಚ್ 2020 (18:47 IST)
ಕೊರೊನಾ ವೈರಸ್ 7 ಸೋಂಕಿತರ ಚಿಕಿತ್ಸೆ ಮುಂದುವರಿದಿದೆ. 

ಕಾರವಾರದ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿರುವ ಜಿಲ್ಲೆಯ ಆರು ಕೊರೊನಾ ಸೋಂಕಿತರು ಹಾಗೂ ಭಟ್ಕಳ‌ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ಸೇರಿದಂತೆ ಎಲ್ಲರ  ಆರೋಗ್ಯ ಸ್ಥಿರವಾಗಿದೆ. ಆತಂಕದ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕಕುಮಾರ  ಮಾಹಿತಿ‌ ನೀಡಿದ್ದಾರೆ.

ಏಳೂ ಸೋಂಕಿತರು ಭಟ್ಕಳದವರಾಗಿದ್ದು, ಆರಂಭದಲ್ಲಿ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಹೆಚ್ಚಿನ ವೈದ್ಯಕೀಯ ಸೌಕರ್ಯ ಕಲ್ಪಿಸುವುದಲ್ಲದೇ ಆಸ್ಪತ್ರೆಯಲ್ಲಿ ಸೋಂಕಿತರ ಕುಟುಂಬದವರು , ಸಂಬಂಧಿಗಳಿಂದ ಉಂಟಾಗುವ ದಟ್ಟಣೆ ತಡೆಗಟ್ಟಲು ಆರು ಜನರನ್ನು ಪತಂಜಲಿಗೆ ಸೇರಿಸಲಾಗಿದೆ.‌

ಸೋಂಕಿತರ ಆರೋಗ್ಯ‌ದಲ್ಲಿ ಯಾವುದೇ ಏರುಪೇರು ಕಂಡುಬರದೆ ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಕೊರೊನಾದಿಂದ ಆತಂಕಗೊಂಡಿರುವ ಜಿಲ್ಲೆಯ ಜನತೆಗೆ ಕೊಂಚ ನೆಮ್ಮದಿ ತಂದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ