ಕುಡಿದ ಮತ್ತಿನಲ್ಲಿ ಟೋಲ್ ಗೇಟ್ ನಲ್ಲಿ ಆಗಿದ್ದೇನು?

ಮಂಗಳವಾರ, 28 ಮೇ 2019 (17:41 IST)
ಕುಡಿದ ಮತ್ತಿನಲ್ಲಿ ಸುಂಕ ವಸೂಲಾತಿ ಕೇಂದ್ರದಲ್ಲಿ ದಾಂಧಲೆ‌ ನಡೆಸಲಾಗಿದೆ.

ಚಿಂತಾಮಣಿ- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಟೋಲ್ ಕಟ್ಟುವ ವಿಚಾರದಲ್ಲಿ ಕಿರಿಕ್ ಆಗಿದೆ. ಕುಡಿದು ನಾಲ್ಕೈದು ಯುವಕರಿಂದ ಟೋಲ್ ಸಿಬ್ಬಂದಿಮೇಲೆ‌ ಹಲ್ಲೆ ನಡೆಸಲಾಗಿದೆ.
ಮದ್ಯ ರಾತ್ತಿ ಹನ್ನೆರಡು ಗಂಟೆಯಲ್ಲಿ ಕುಡಿದ ಯುವಕರಿಂದ ದಾಂಧಲೆ ನಡೆದಿದೆ.

ಟೋಲ್ ಸಿಬ್ಬಂದಿ ಅಮರಾವತಿ ಮೂಲದ ಯವಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಬೀಚಗೊಂಡಹಳ್ಳಿ ಬಳಿ  ಇರುವ ವಾಹನ ಸುಂಕ ವಸೂಲಾತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ವೇಮಗಲ್ ಪೊಲೀಸರು 
ಹಲ್ಲೆ ಮಾಡಿದ ನಾಲ್ಕು  ಜನ  ಯುವಕರನ್ನು ಬಂಧಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ