‘ಮುಳುಗು ಸೇತುವೆ’ ಕಥೆ ಏನಾಗ್ತಿದೆ ಗೊತ್ತಾ?

ಗುರುವಾರ, 8 ಆಗಸ್ಟ್ 2019 (18:57 IST)
ಘಾಟಿ ಪ್ರದೇಶದಲ್ಲಿ ವರುಣ ತನ್ನ ಅಬ್ಬರನ್ನು ಮುಂದುವರಿಸಿದ್ದಾನೆ. ಇದರಿಂದಾಗಿ ಮುಳುಗು ಸೇತುವೆ ಖ್ಯಾತಿಯ ಸೇತುವೆಗೆ ಧಕ್ಕೆ ಬರೋ ಲಕ್ಷಣಗಳು ಗೋಚರಿಸಿವೆ.

ಮುಳುಗಡೆ ಭೀತಿಯಲ್ಲಿದೆ ಕಡಬದ ಹೊಸ್ಮಠ ಸೇತುವೆ. 'ಮುಳುಗು ಸೇತುವೆ' ಎಂದೇ ಕರೆಯಲ್ಪಡುವ ಹೊಸ್ಮಠ ಸೇತುವೆಯು ಇದೀಗ ಮುಳುಗುವ ಆತಂಕ ಎದುರಿಸುತ್ತಿದೆ.

ಉಪ್ಪಿನಂಗಡಿ-ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊ‍ಸ್ಮಠ ಸೇತುವೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಘಾಟಿ ಪ್ರದೇಶದಲ್ಲಿ ಭಾರೀ ಮಳೆ - ಗುಂಡ್ಯ ಹೊಳೆಯಲ್ಲಿ ನೀರಿನ ಅಬ್ಬರದಿಂದಾಗಿ ಮುಳಗು ಸೇತುವೆ ಮುಳುಗಲಿದೆ.

ಹೊಸ್ಮಠ ಸೇತುವೆ ಸಮೀಪದ ಮನೆತೋಟಗಳು ಈಗಾಗಲೇ ಜಲಾವೃತವಾಗಿವೆ. ಹೊಸ್ಮಠಕ್ಕೆ ಕುತೂಹಲದಿಂದ ನೆರೆ ನೀರನ್ನು ನೋಡಲು ಬರುತ್ತಿದ್ದಾರೆ ಜನರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ