ನಮ್ಮ ಆಹಾರದ ಆಯ್ಕೆಯನ್ನು ಪ್ರಶ್ನಿಸುವ ಯೋಗಿ ಆದಿತ್ಯನಾಥ್ ಯಾರು?: ಸಿಎಂ

ಮಂಗಳವಾರ, 9 ಜನವರಿ 2018 (13:37 IST)
ನಾವು ಏನನ್ನು ಸೇವಿಸಬೇಕು? ಏನನ್ನು ಸೇವಿಸಬಾರದು ಎಂದು ಹೇಳಲು ಸಿಎಂ ಯೋಗಿ ಆದಿತ್ಯನಾಥ್ ಯಾರು ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ನಾವು ಸೇವಿಸುವ ಆಹಾರದ ಆಯ್ಕೆಯನ್ನು ಪ್ರಶ್ನಿಸುವವರು ಇವರು ಯಾರು? ಅನೇಕ ಹಿಂದುಗಳು ಗೋಮಾಂಸ ಸೇವಿಸುತ್ತಾರೆ. ಒಂದು ವೇಳೆ ನಾನು ಗೋಮಾಂಸ ಸೇವಿಸಲು ಬಯಸಿದಲ್ಲಿ ಅದನ್ನು ತಡೆಯಲು ಇವರು ಯಾರು? ಎಂದು ಪ್ರಶ್ನಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಹಿಂದು ಎಂದು ಹೇಳುತ್ತಾರೆ.ಆದ್ರೆ ಗೋಮಾಂಸ ಸೇವನೆಗೆ ಪ್ರೋತ್ಸಾಹ ನೀಡುತ್ತಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡಿದ ಟ್ವೀಟ್‌ಗೆ ಸಿಎಂ ತಿರುಗೇಟು ನೀಡಿದ್ದಾರೆ. 
 
ನಾನು ಹಸುಗಳಿಗೆ ಮೇವು ನೀಡಿದ್ದೇನೆ, ಸೆಗಣಿ ಬಳಿದಿದ್ದೇನೆ, ಹಸುವಿನ ರಕ್ಷಣೆ ಮತ್ತು ಕಾಳಜಿಯ ಬಗ್ಗೆ ಟೀಕಿಸುತ್ತಿರುವ ಯೋಗಿ ಆದಿತ್ಯನಾಥ್ ಯಾ ಜಾನುವಾರುಗಳನ್ನು ಮೇಯಿಸುತ್ತಿದ್ದರು? ಅವರಿಗೆ ಹಸು ಸಂರಕ್ಷಣೆಯ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕು ಇದೆ?" ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ