ನೂತನ ಸಚಿವರ ಪಟ್ಟಿಯಲ್ಲಿ ಉಮೇಶ್ ಕತ್ತಿಯ ಹೆಸರು ಇಲ್ಲದಿರುವುದಕ್ಕೆ ಸಿಎಂ ಹೇಳಿದ್ದೇನು?

ಗುರುವಾರ, 6 ಫೆಬ್ರವರಿ 2020 (07:34 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ನೂತನ ಸಚಿವರ ಪಟ್ಟಿ ರಿಲೀಸ್ ಮಾಡಿದ್ದು, ಅದರಲ್ಲಿ ಉಮೇಶ್ ಕತ್ತಿಯ ಹೆಸರು ಇರದೇ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ.


ಈ ಬಗ್ಗೆ  ಮಾತನಾಡಿದ ಸಿಎಂ ಯಡಿಯೂರಪ್ಪ, ರಾಷ್ಟ್ರೀಯ ನಾಯಕರು ರಾಜೀನಾಮೆ ಒಟ್ಟು ಬಂದಿರುವ ಶಾಸಕರಿಗಷ್ಟೇ ಸಚಿವರನ್ನಾಗಿ ಮಾಡಿ, ಸದ್ಯಕ್ಕೆ ಉಳಿದವರನ್ನು ಸಂಪುಟಕ್ಕೆ ಸೇರಿಸುವುದು ಬೇಡ ಎಂದು ಸೂಚಿಸಿದ ಕಾರಣ ಉಮೇಶ್ ಕತ್ತಿಯ ಹೆಸರು ಸೇರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಉಮೇಶ್ ಕತ್ತಿ ಅವರು ನೂರಕ್ಕೆ ನೂರರಷ್ಟು ಮಂತ್ರಿ ಆಗುತ್ತಾರೆ. ಈಗ ಆಗದಿದ್ದರೂ ಮುಂದೆ ಅವರನ್ನು ಮಂತ್ರಿ ಮಾಡುತ್ತೇವೆ. ಆದರೆ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೊಡುವುದು ಕಷ್ಟ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ