ಅಗೆಯುತ್ತಿದ್ದ ಜೆಸಿಬಿಗೆ ಜನರು ಅಡ್ಡ ಬಿದ್ದದ್ಯಾಕೆ?

ಮಂಗಳವಾರ, 11 ಡಿಸೆಂಬರ್ 2018 (15:06 IST)
ಜೆಸಿಬಿಗಳು ಕೆಲಸ ಮಾಡುವಾಗ ಜನರು ಅವುಗಳಿಗೆ ಅಡ್ಡ ಬಿದ್ದು, ಅವುಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಅಕ್ರಮ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸ.ನಂ 77, 78 ಒಟ್ಟು 185.03 ಗುಂಟೆ ಮೀಸಲು ಅರಣ್ಯ ಪ್ರದೇಶವನ್ನು  ಸರ್ಕಾರದ ಅಧಿನಿಯಮದ ಪ್ರಕಾರ ಕೆಲಸ ಮಾಡುತ್ತಿರುವ ಅಧಿಕಾರಿಗಳು, ತೆರವುಗೊಳಿಸುತ್ತಿದ್ದಾರೆ. ಆದರೆ ಅಲ್ಲಿನ ನಿವಾಸಿಗಳು ಜೆಸಿಬಿಗಳಿಗೆ ಅಡ್ಡ ಬಿದ್ದು ಅಡ್ಡಿ ಪಡಿಸಿದ ಘಟನೆ ನಡೆದಿದೆ.

ನಮಗೆ ಕ್ರಿಮಿನಾಶಕ ನೀಡಿ ಎಂದು ಅಲ್ಲಿನ ಜನರು ಗೋಗರೆಯುತ್ತಿದ್ದಾರೆ. ಐದು ಜೆ.ಸಿ.ಬಿ ಗಳೊಂದಿದೆ ತೆರವು ಕಾರ್ಯಾಚರಣೆ ಮಾಡುತ್ತಿರುವ ಅಧಿಕಾರಿಗಳು, ಕೆಲಸ ನಿಲ್ಲಿಸಲು ನಿರಾಕರಿಸುತ್ತಿದ್ದಾರೆ.

ಅಧಿಕಾರಿಗಳ ಕ್ರಮ ಹಾಗೂ ತೆರವು ಕಾರ್ಯಾಚರಣೆಗೆ ಅಲ್ಲಿನ ಜನರು ಅಸಮಧಾನ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ಸಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ