ಮಹಿಳೆಯ ಮೇಲೆ ಸಿದ್ದರಾಮಯ್ಯ ರೋಶಾವೇಶಗೊಂಡಿದ್ದಕ್ಕೆ ಬಿಜೆಪಿಯವರು ಹೇಳಿದ್ದೇನು?

ಮಂಗಳವಾರ, 29 ಜನವರಿ 2019 (11:00 IST)
ಬೆಂಗಳೂರು :  ಮಹಿಳೆಯ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ರೋಶಾವೇಶಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಿದ್ದರಾಮಯ್ಯಗೆ ಟಾಂಗ್ ನೀಡಿದೆ.


ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮಗನ ವಿರುದ್ಧ ದೂರು ಹೇಳಿದ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೇಲೆ ದರ್ಪ ತೋರಿದ್ದರು.


ಈ ವಿಚಾರವಾಗಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಮರ್ಯಾದಾ ಪುರುಷೋತ್ತಮ ಸಿದ್ದರಾಮಯ್ಯ ಅವರೇ ಇದು ಲಫಂಗಾ ರಾಜಕೀಯ ಅಲ್ಲದೇ ಮತ್ತೇನು? ನಿಮಗೆ ಹೇಸಿಗೆ ಎನಿಸುವುದಿಲ್ಲವೇ ? ಮಹಿಳಾ ಪೊಲೀಸ್ ಸಿಬ್ಬಂದಿ ನಿಂದನೆ ಮಾಡುವುದು, ರೈತ ಮಹಿಳೆ ಮೇಲೆ ಕೀಳುಮಟ್ಟದ ಶಬ್ದ ಬಳಕೆ ಮಾಡುವುದು, ಮಹಿಳೆಯರನ್ನು ತಳ್ಳುವುದು ಮತ್ತು ಅವರ ನಿಂದನೆ ಮಾಡುವುದು, ರೆಸಾರ್ಟ್ ರಾಜಕಾರಣ ಮಾಡುವುದು ಶಾಸಕರ ಹತ್ಯೆಗೆ ಪ್ರಯತ್ನಿಸುವುದು, ಆದರೆ ರೈತರ ಸಾಲ ಮನ್ನಾ ಮಾತ್ರ ಇಲ್ಲ’ ಎಂದು ಬಿಜೆಪಿ ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ