ಆ ಸಚಿವರ ಮೇಲೆ ಸಿಎಂ ಕೆಂಡಕಾರಿದ್ಯಾಕೆ?

ಸೋಮವಾರ, 15 ಜುಲೈ 2019 (15:52 IST)

ಬಿಜೆಪಿಯವರನ್ನು ಭೇಟಿ ಮಾಡಿದ್ದ ಸಚಿವರಿಬ್ಬರ ಮೇಲೆ ಸಿಎಂ ಫುಲ್ ಗರಂ ಆಗಿದ್ದಾರೆ.

ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದ ರಾಜ್ಯದ ಸಚಿವರಿಬ್ಬರ ಮೇಲೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲೇ ಗರಂ ಆಗಿರುವ ಘಟನೆ ನಡೆದಿದೆ.

ಸಚಿವ ಸಾ.ರಾ ಮಹೇಶ್ ಈಚೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಹಾಗೂ ಈಶ್ವರಪ್ಪರನ್ನು ಭೇಟಿ ಮಾಡಿದ್ರು. ಇನ್ನೊಂದೆಡೆ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಜಿ.ಟಿ.ದೇವೇಗೌಡ ಅವರಿಗೆ ಸ್ವಾಗತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗುತ್ತಿವೆ.

ಬಿಜೆಪಿಯವರನ್ನ ಭೇಟಿ ಮಾಡಿದ್ಯಾಕೆ? ನಿಮ್ಮಾಟ, ಡ್ರಾಮಾ ಎಲ್ಲಾ ನೋಡಬೇಕಿದೆ ಅಂತ ಕಿಡಿಕಾರಿದ್ದಾರೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ