ರಮಾನಾಥ ರೈಗೆ ಗೃಹ ಖಾತೆ ತಪ್ಪಿದ್ದೇಕೆ ಗೊತ್ತಾ?

ಶನಿವಾರ, 2 ಸೆಪ್ಟಂಬರ್ 2017 (09:38 IST)
ಬೆಂಗಳೂರು: ಕೊನೆ ಕ್ಷಣದವರೆಗೂ ಗೃಹ ಖಾತೆ ರಮಾನಾಥ ರೈ ತೆಕ್ಕೆ ಬೀಳುತ್ತದೆ ಎಂದೇ ಸುದ್ದಿಯಾಗಿತ್ತು. ಆದರೆ ಕಡೇ ಕ್ಷಣದಲ್ಲಿ ಅದು ರಾಮಲಿಂಗಾ ರೆಡ್ಡಿ ಪಾಲಾಗಿತ್ತು.

 
ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಸಿಎಂ ಸಿದ್ದರಾಮಯ್ಯ ಗೃಹ ಖಾತೆಯನ್ನು ಕೊನೆ ಕ್ಷಣದಲ್ಲಿ ರಾಮಲಿಂಗಾ ರೆಡ್ಡಗೆ ವಹಿಸಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರಿಗೆ ಈ ಮೂಲಕ ಮಹತ್ವದ ಖಾತೆ ಕೈ ತಪ್ಪಿದೆ.

ಇದಕ್ಕೆ ಕಾರಣ ಪ್ರತಿಪಕ್ಷಗಳ ಪ್ರತಿಭಟನೆ ಬಿಸಿ. ಹೈಕಮಾಂಡ್ ವಿರೋಧವಿದ್ದರೂ, ರೈಗೇ ಗೃಹ ಖಾತೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದರು. ಆದರೆ ಬಿಜೆಪಿ ಬೃಹತ್ ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಇದು ಪಕ್ಷದ ವರ್ಚಸ್ಸಿಗೆ ಚುನಾವಣೆ ಸಂದರ್ಭದಲ್ಲಿ ಧಕ್ಕೆಯಾಗಬಹುದೆಂಬ ತೀರ್ಮಾನಕ್ಕೆ ಬಂದಿದ್ದರಿಂದ ರೈ ಗೆ ಗೃಹ ಖಾತೆ ಸಿಗಲಿಲ್ಲ.

ಇದನ್ನೂ ಓದಿ.. ಕಾಂಗ್ರೆಸ್ ಗೆ ದರ್ಶನ್, ಬಿಜೆಪಿಗೆ ಸುದೀಪ್ ಗಾಳ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ