ರಮಾನಾಥ್ ರೈ ಬದಲಿಗೆ ರಾಮಲಿಂಗಾರೆಡ್ಡಿಗೆ ಗೃಹಖಾತೆ

ಶುಕ್ರವಾರ, 1 ಸೆಪ್ಟಂಬರ್ 2017 (19:06 IST)
ಗೃಹಖಾತೆಯನ್ನು ರಮಾನಾಥ್ ರೈಗೆ ನೀಡಲಾಗುತ್ತಿದೆ ಎನ್ನುವ ವರದಿಗಳ ನಡುವೆಯೇ ಕೊನೆಯ ಗಳಿಗೆಯಲ್ಲಿ ತೀರ್ಮಾನ ಬದಲಿಸಿದ ಸಿಎಂ ಸಿದ್ದರಾಮಯ್ಯ ಗೃಹಖಾತೆಯನ್ನು ರಾಮಲಿಂಗಾರೆಡ್ಡಿಯವರಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ.
ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ.ವರ ಖಾತೆ ಬದಲಾಯಿಸಿದ ಸಿಎಂ, ಇದೀಗ ಗೃಹ ಖಾತೆ ನೀಡಿ ಮುಂಬಡ್ತಿ ನೀಡಿದ್ದಾರೆ.
 
ಮೊದಲಿನಿಂದಲೂ ಗೃಹ ಖಾತೆಯನ್ನು ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ನೀಡಬೇಕು ಎನ್ನುವುದು ಸಿಎಂ ನಿರ್ಧಾರವಾಗಿತ್ತು. ಆದರೆ, ಒಲ್ಲದ ಮನಸ್ಸಿನಿಂದ ಕೊನೆಯ ಗಳಿಗೆಯಲ್ಲಿ ನಿರ್ಧಾರ ಬದಲಿಸಿ ರಾಮಲಿಂಗಾರೆಡ್ಡಿಗೆ ನೀಡಿದ್ದಾರೆ.
 
ಗೃಹ ಖಾತೆಯನ್ನು ರಮಾನಾಥ್ ರೈ ಗೆ ನೀಡಿದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು.
 
ಚುನಾವಣೆ ವರ್ಷವಾಗಿದ್ದರಿಂದ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎನ್ನುವ ಅಂಶವನ್ನು ಪರಿಗಣಿಸಿ ಗೃಹ ಖಾತೆಯನ್ನು ರಾಮಲಿಂಗಾರೆಡ್ಡಿಯವರಿಗೆ ವಹಿಸಿ ಸಿಎಂ ಸಿದ್ದರಾಮಯ್ಯ ಚಾಣಾಕ್ಷತನ ಮೆರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ