ಅತ್ಯಾಚಾರಕ್ಕೆ ಯತ್ನಿಸಿದವನಿಗೆ ತಕ್ಕ ಪಾಠ ಕಲಿಸಿದ ಮಹಿಳೆ

ಬುಧವಾರ, 22 ಫೆಬ್ರವರಿ 2017 (07:53 IST)
ರಾಜ್ಯದಲ್ಲಿ ಒಂಟಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರು ಸ್ವಯಂ ರಕ್ಷಣೆಗೆ ಸನ್ನದ್ಧರಾಗಲೇಬೇಕಿದೆ. ಪ್ರತಿನಿತ್ಯ ಲೈಂಗಿಕ ಹಲ್ಲೆಗೆ ಗುರಿಯಾಗುತ್ತಿರುವ ಮಹಿಳೆಯರು ತಮ್ಮ ವಿರುದ್ಧ ಅನ್ಯಾಯದ ವಿರುದ್ಧ ಸೆಟೆದು ನಿಲ್ಲಲು ಪ್ರೇರಣಾದಾಯಕವಾದ ಘಟನೆ ಇದು.
ತನ್ನ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ ದುಷ್ಕರ್ಮಿಯೊಬ್ಬನ ಕಣ್ಣಿಗೆ ಮೆಣಸಿನಪುಡಿ ಎರಚಿದ ಮಹಿಳೆಯೋರ್ವರು ನಡೆಯಲಿದ್ದ ಅವಘಡದಿಂದ ಪಾರಾಗಿದ್ದಾರೆ ಕಡಲನಾಡಿನ ಕಡಂದಲೆ ಸಮೀಪದ ಗುಡ್ಡೆಯಂಗಡಿಯಲ್ಲಿ ಈ ಧೀರೋದಾತ್ತ ಪ್ರಸಂಗ ನಡೆದಿದೆ.
 
ಗುಡ್ಡೆಯಂಗಡಿ ನಿವಾಸಿಯಾದ ಮಹಿಳೆ, ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ನುಗ್ಗಿದ ಆರೋಪಿ ಸುಧೀರ್(21) ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಹಿಂದೆಯೂ ಸಹ ಆತ ಕುಂಟುನೆಪ ಹೇಳಿಕೊಂಡು ಇದೇ ರೀತಿ ಆಕೆಯ ಮನೆ ಪ್ರವೇಶಿಸಿದ್ದ. ಆದರೆ ಸೋಮವಾರ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ತಕ್ಷಣ ಎಚ್ಚೆತ್ತ ಮಹಿಳೆ ಆತನ ಕಣ್ಣಿಗೆ ಖಾರದಪುಡಿ ಎರಚಿದ್ದಾಳೆ.
 
ಆಕಸ್ಮಿಕ ದಾಳಿಗೆ ಬೆದರಿದ ಯುವಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಒಫ್ಪಿಸಿದ್ದಾರೆ
 
ಆರೋಪಿಮೂಡುಬಿದಿರೆಯ ಮೊಬೈಲ್ ಔಟ್ಲೆಟ್‍ನಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ