ನಿನ್ನೆ ಹೋಟೆಲ್ನಲ್ಲಿ ನಡೆದ ಅತೃಪ್ತ ಮಾಜಿ ಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದ ಈಶ್ವರಪ್ಪ, ಪದಾಧಿಕಾರಿಗಳ ನೇಮಕ ಕುರಿತಂತೆ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಸ್ವೀಕರಿಸಿ, ರಾಜ್ಯದ ಉಸ್ತುವಾರಿ ಹೊತ್ತಿರುವ ಮುರಳಿಧರ್ ಅವರಿಗೆ ರವಾನಿಸಿದ್ದರು.
ಆದಾಗ್ಯೂ, ಪದಾಧಿಕಾರಿಗಳ ನೇಮಕದ ಅಪಸ್ವರದ ನಡುವೆಯೂ ಜಿಲ್ಲಾ ಪ್ರಭಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದ ಯಡಿಯೂರಪ್ಪ, ತಮ್ಮ ಎದುರಾಳಿಗಳಿಗೆ ಪ್ರಬಲ ತಿರುಗೇಟು ನೀಡಿದ್ದಾರೆ.