ನಿನ್ನೆ ಸುರಿದ ಭಾರೀ ಮಳೆಗೆ ನಗರದ ಹಲವೆಡೆ ಭಾರೀ ಅನಾಹುತ

ಸೋಮವಾರ, 22 ಮೇ 2023 (14:52 IST)
ನಿನ್ನೆ ಸುರಿದ ಭಾರೀ ಮಳೆಗೆ ನಗರದ ಹಲವೆಡೆ ಭಾರೀ ಅನಾಹುತ ಸಂಭವಿಸಿದೆ.ವಿವಿಧ ಕಡೆಗಳಲ್ಲಿ 65ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.ಚಿತ್ರಕಲಾ ಪರಿಷತ್ ರಸ್ತೆಯಲ್ಲಿ ಕಾರ್ ಮೇಲೆ ಮರಬಿದ್ದು ಪೂರ್ತಿ ಜಖಂಗೊಂಡಿದೆ.ಡಿಸೈರ್ ಕಾರ್ ಮೇಲೆ ಮರ ಬಿದ್ದಿದೆ.ಪೂರ್ತಿ ಕಾರು ಡಿಸೈರ್ ಜಖಂಗೊಂಡಿದೆ.ಕೇವಲ ಮರ ಮಾತ್ರವಲ್ಲ, ರಸ್ತೆಗಳು ಬ್ಲಾಕ್ ಆಗಿ ಮನೆಗಳಿಗೆ ಸಮಸ್ಯೆ ಆಗಿದೆ.ಈ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.ಇದೇ ರಸ್ತೆಯಲ್ಲಿ ಸಿಎಂ ಓಡಾಡ್ತಾರೆ, ಆದ್ರೆ ಈ ಸಮಸ್ಯೆ ಯಾವುದೂ ಅವ್ರಿಗೆ ಕಾಣಿಸೋದಿಲ್ಲ.ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ