ನೀವು ಕಾಂಗ್ರೆಸ್ ನಲ್ಲಿ ಒಬ್ಬಂಟಿಯಾಗಿದ್ದೀರ–ಸಿದ್ದರಾಮಯ್ಯಗೆ ಸಿಎಂ ವ್ಯಂಗ್ಯ

ಬುಧವಾರ, 20 ನವೆಂಬರ್ 2019 (11:33 IST)
ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನೀವು ಏಕಾಂಗಿ ಎಂಬುದನ್ನು ಮರೆಯಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ಬಿಎಸ್ ವೈ ತಿರುಗೇಟು ನೀಡಿದ್ದಾರೆ.




ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಯೋಗ್ಯತೆಗೆ ಒಂದು ಸೀಟು ಗೆಲ್ಲೋಕೆ ಆಗಲಿಲ್ಲ. ಲೋಕಸಭೆಯಲ್ಲಿ ಅಧಿಕೃತವಾಗಿ ವಿರೋಧ ಪಕ್ಷದ  ಸ್ಥಾನ ಸಿಗಲಿಲ್ಲ. ಆದರೂ ಬೊಬ್ಬೆ ಹೊಡೆದುಕೊಂಡು ತನ್ನ ಬಿಟ್ಟು ಬೇರೆ ಯಾರೂ ರಾಜಕಾರಣದಲ್ಲಿ ಇಲ್ಲ ಅಂತ ಹೊರಟಿದ್ದೀರ. ನೀವು ಕಾಂಗ್ರೆಸ್ ನಲ್ಲಿ ಒಬ್ಬಂಟಿಯಾಗಿದ್ದೀರ ಎಂಬುದನ್ನು ಮರೆಯಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂಬಿಎಸ್ ವೈ  ಕಿಡಿಕಾರಿದ್ದಾರೆ.


ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹೋದ ಕಡೆಯಲ್ಲ ಮನಬಂದಂತೆ ಮಾತನಾಡುತ್ತಿದ್ದಾರೆ. 17 ಶಾಸಕರು ಕೂಡ ಚುನಾವಣೆಗೆ ನಿಲ್ಲಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈಗ ಅವರನ್ನು ಅನರ್ಹರು ಎಂದು ಹೇಳೋಕೆ ಇವರು ಯಾರು  ಅನರ್ಹರು ಯಾರು ಎಂಬುದನ್ನು ರಾಜ್ಯದ ಜನರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ