ಕುರುಬ ಸಮುದಾಯದ ಬಗ್ಗೆ ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ; ಮಾಧುಸ್ವಾಮಿ ಪರ ಕ್ಷಮೆಯಾಚಿಸಿದ ಸಿಎಂ

ಬುಧವಾರ, 20 ನವೆಂಬರ್ 2019 (10:15 IST)
ಬೆಂಗಳೂರು : ಕುರುಬ ಸಮುದಾಯದ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಮಾಧುಸ್ವಾಮಿ ಪರ ಸಿಎಂ ಯಡಿಯೂರಪ್ಪ ಕ್ಷಮೆಯಾಚಿಸಿದ್ದಾರೆ.




ಹುಳಿಯಾರು ಸರ್ಕಲ್ ಗೆ ಕನಕದಾಸರ ಹೆಸರಿಡುವ ವಿಚಾರಕ್ಕೆ ಕುರುಬ ಸಮುದಾಯದ ಬಗ್ಗೆ ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕುರುಬ ಸಮುದಾಯದವರು ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದೀಗ ಈ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಸಿಎಂ ಬಿಎಸ್ ವೈ ಮಾಧುಸ್ವಾಮಿ ಪರ ಕ್ಷಮೆಯಾಚಿಸಿದ್ದಾರೆ.  ಹುಳಿಯಾರು ಸರ್ಕಲ್ ಗೆ ಕನಕದಾಸರ ಹೆಸರಿಡೋಕೆ ನಮ್ಮ ತಕರಾರಿಲ್ಲ. ಈ ಬಗ್ಗೆ ಸಚಿವ ಮಾಧುಸ್ವಾಮಿಗೂ ಯಾವುದೇ ತಕರಾರಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ