ಕಾಂಗ್ರೆಸ್ ಮುಗಿಸಲು ನಿಮ್ಮಿಂದ ಸಾಧ್ಯವಿಲ್ಲ ಅಂತ ಗುಡುಗಿದ ಸಿದ್ದರಾಮಯ್ಯ

ಭಾನುವಾರ, 8 ಡಿಸೆಂಬರ್ 2019 (21:04 IST)
ಕೈ ಪಾಳೆಯದ ಕಥೆಯನ್ನು ಸಂಪೂರ್ಣವಾಗಿ ಮುಗಿಸಲು ನಿಮ್ಮಿಂದ ಸಾಧ್ಯವೇ ಇಲ್ಲ. ಹೀಗಂತ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸವಾಲ್ ಹಾಕಿದ್ದಾರೆ.

ಕಾಂಗ್ರೆಸ್ ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯವರು ಕನಸುಕಾಣುತ್ತಿರೋದು ಹಗಲುಗನಸು. ಕಾಂಗ್ರೆಸ್ ಮುಕ್ತ ಅನ್ನೋದು ಬಿಜೆಪಿ ಭ್ರಮೆಯಾಗಿದೆ. ಹೀಗಂತ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ, ಬೈ ಎಲೆಕ್ಷನ್ ಫಲಿತಾಂಶ ಏನೇ ಬಂದರೂ ಸ್ವೀಕರಿಸೋದಾಗಿ ಹೇಳಿದ ಸಿದ್ದರಾಮಯ್ಯ, ಉಪ ಚುನಾವಣೆ ಸಂಬಂಧವಾಗಿ ಫಲಿತಾಂಶಗಳನ್ನು ನಂಬೋದಿಲ್ಲ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ