ಸೀಟು ಹಂಚಿಕೆಯ ಎಲ್ಲಾ ಗೊಂದಲ ನಿವಾರಣೆ ಮಾಡ್ತೀವಿ-ನಿಖಿಲ್ ಕುಮಾರಸ್ವಾಮಿ

geetha

ಶುಕ್ರವಾರ, 23 ಫೆಬ್ರವರಿ 2024 (16:04 IST)
ಬೆಂಗಳೂರು- ನಗರದ ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ದೆಹಲಿಗೆ ಹೋಗಿದ್ವಿ.ಕೆಲವೇ ದಿನಗಳಲ್ಲಿ ಸೀಟು ಹಂಚಿಕೆಯ ಎಲ್ಲಾ ಗೊಂದಲ ನಿವಾರಣೆ ಮಾಡ್ತೀವಿ.ರಾಷ್ಟ್ರನಾಯಕರು ಕುಮಾರಸ್ವಾಮಿ,‌ ದೇವೇಗೌಡರು  ತೀರ್ಮಾನ‌ ಮಾಡ್ತಾರೆ.ಕಳೆದ ವಿಧಾನಸಭೆ ಚುನಾವಣೆ ಓಟ್ ಶೇರ್ ತೆಗೆದುಕೊಂಡ್ರೆ, ಮಂಡ್ಯದಲ್ಲಿ ಬಿಜೆಪಿಗಿಂತ ಮೂರು ಪಟ್ಟು ಹೆಚ್ಚಿನ ಮತಗಳಿವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
 
ಕೋಲಾರ,‌ಮಂಡ್ಯ ಹಾಸನದಲ್ಲಿ ಜೆಡಿಎಸ್ ಪರ ಹೆಚ್ಚಿನ ಮತ ಚಲಾವಣೆಯಾಗಿವೆ ಈ ಹಿನ್ನಲೆ ಸೀಟು ಹಂಚಿಕೆಯನ್ನು ವರಿಷ್ಠರು ಬಗೆ ಹರಿಸ್ತಾರೆ.ಯಾವುದೇ ಗೊಂದಲಕ್ಕೆ ಎಡೆ ಮಾಡುವ ಪ್ರಶ್ನೆಯಿಲ್ಲ.ಸಣ್ಣ ಪುಟ್ಟಭಿನ್ನಾಭಿಪ್ರಾಯ ಬಗೆ ಹರಿಸೊ ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ.ಮಂಡ್ಯ ವಿಚಾರಕ್ಕೆ ಪದೇ ಪದೇ ಏಕೆ ಚರ್ಚೆ ಮಾಡ್ತೀರಾ?ನಮ್ಮ ಮುಂದೆ ಇರುವುದು 28ಲೋಕಸಭಾ ಕ್ಷೇತ್ರ ಮಂಡ್ಯದಲ್ಲಿ ನಾನು ನಿಲ್ತೇನೋ, ಕುಮಾರಸ್ವಾಮಿ ನಿಲ್ತಾರೋ ಅಥವಾ ಬೇರೆ ಅರ್ಹರು ಯಾರು ನಿಲ್ತಾರೋ,ಬಿಜೆಪಿ ಹೈಕಮ್ಯಾಂಡ್ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಿ ತೀರ್ಮಾನ ಕೊಡ್ತಾರೆ‌.ಈಗಿನ ಸರ್ಕಾರ ಎಲ್ಲೋ ಒಂದು ಕಡೆ ಅಧಿಕಾರ ದುರುಪಯೋಗ ಮಾಡಿಕೊಳ್ಳೊ ಪ್ರಯತ್ನ ಮಾಡ್ತಿದೆ‌.ಇದು ಹೆಚ್ಚು ದಿನ ನಡೆಯಲ್ಲ,ಮುಂದಿನ ಎರಡು ಮೂರು ದಿನ ಇದೆ‌.ಯಾವ ರೀತಿ ತೀರ್ಮಾನ ಮಾಡುತ್ತೋ ಕಾದು ನೋಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ